ಮುಂದಿನ ತಿಂಗಳಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ- ಕೇಂದ್ರ ಸಚಿವ ನಿತಿನ್ ಗಡ್ಕರಿ.

ಬೆಂಗಳೂರು,ಜನವರಿ,5,2023(www.justkannada.in): ಮುಂದಿನ ತಿಂಗಳಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಯಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.

ಇಂದು ಹೆಲಿಕಾಪ್ಟರ್ ಮೂಲಕ ಆಗಮಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಪರಿಶೀಲಿಸಿದರು. ಈ ವೇಳೆ ಸಚಿವರಾದ ಅಶ್ವಥ್ ನಾರಾಯಣ್,ಗೋಪಾಲಯ್ಯ, ಎಂಎಲ್ ಸಿ  ಸಿ.ಪಿ ಯೋಗೇಶ್ವರ್, ಸಂಸದ ಡಿ.ಕೆ ಸುರೇಶ್ ಉಪಸ್ಥಿತರಿದ್ದರು.

ಹೆದ್ದಾರಿ ಪರಿಶೀಲನೆ ಬಳಿಕ ಮಾತನಾಡಿದ ನಿತಿನ್ ಗಡ್ಕರಿ, 9 ಸಾವಿರ ಕೋಟಿ  ರೂ. ವೆಚ್ಚಲ್ಲಿ ಹೆದ್ದಾರಿ ನಿರ್ಮಾಣ ಮಾಡಿದ್ದೇವೆ. ಇನ್ನೂ ಸ್ವಲ್ಪ ಕಾಮಗಾರಿ ಬಾಕಿ ಇದೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ತಿಂಗಳು ಹೈವೆ ಲೋಕಾರ್ಪಣೆಯಾಗಲಿದೆ. 1.20 ನಿಮಿಷದಲ್ಲಿ  ಬೆಂಗಳೂರು-ಮೈಸೂರುಗೆ ಹೋಗಬಹುದು ಎಂದರು.

Key words: Bengaluru-Mysore-Dashpath -highway – inaugurate – next month-Union Minister -Nitin Gadkari.