ಕುಖ್ಯಾತ 4 ಜನ ಅಂತರ ರಾಜ್ಯ ಕಳ್ಳರ ಬಂಧನ, 28.3 ಲಕ್ಷ ರೂ. ಮೌಲ್ಯದ ದ್ವಿಚಕ್ರವಾಹನ ವಶ

ಬೆಂಗಳೂರು,ಅಕ್ಟೊಂಬರ್,04,2020(www.justkannada.in) : ದರೋಡೆಗೆ ಹೊಂಚು ಹಾಕುತ್ತಿದ್ದ ಕುಖ್ಯಾತ 4 ಜನ ಅಂತರ ರಾಜ್ಯ ಕಳ್ಳರ ಬಂಧಿಸಿ, 28.3 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 20 ದ್ವಿಚಕ್ರ ವಾಹನಗಳನ್ನು ಆರ್.ಟಿ.ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.jk-logo-justkannada-logoಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಾನಗರ, ಎಚ್.ಜಿ.ಎಚ್.ಲೇಔಟ್ನ ಕೇಕ್ ಪ್ಯಾಲೇಸ್ ಮುಂಭಾಗ ಗಸ್ತಿನಲ್ಲಿದ್ದ ಪಿಎಸ್ಐ ಸುಭಾಷ್ ಚಂದ್ರ ಪಟ್ಟಣ ಮತ್ತು ಸಿಬ್ಬಂದಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ವಿಚಾರಣೆಗೆ ಒಳಪಡಿಸಿದಾರೆ.arrest-notorious-inter-state-robbers-worth-Rs 28.3 lakh-Worth-two-wheeled

ಈ ಸಂದರ್ಭ ಒಂಟಿಯಾಗಿ ಓಡಾಡುವವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಲ್ಲಿ ದರೋಡೆಗೆ ಸಂಚು ಪ್ರಕರಣ ದಾಖಲಾಗಿದೆ.  arrest-notorious-inter-state-robbers-worth-Rs 28.3 lakh-Worth-two-wheeledಶೇಕ್ ಅಬ್ರಾರ್(23),ಸೈಫ್ ವುಲ್ಲಾ ಬಾಷಾ(ಫೀರು)(26), ಮುಫೀದ್ ವುಲ್ಲಾಖಾನ್(29),  ಅತೀಕ್ ಹುಸೇನ್(ಅತೀಕ್)(29) ನಾಲ್ಕು ಜನ ಆರೋಪಿಗಳನ್ನು ಬಂಧಿಸಿ, 28.3 ಲಕ್ಷ ರೂ. ಬೆಲೆ ಬಾಳುವ 10-ರಾಯಲ್ ಎನ್ ಪೀಲ್ಡ್ ಬುಲೆಟ್, 3-ಪಲ್ಸರ್, 1-ಟಿ.ವಿ.ಎಸ್, 6-ಹೋಂಡಾ ಆಕ್ಟೀವ್ ಒಟ್ಟು 20 ದ್ವಿಚಕ್ರವಾಹನಗಳನ್ನು ಶಪಡಿಸಿಕೊಳ್ಳಲಾಗಿದೆ.

key words : arrest-notorious-inter-state-robbers-worth-Rs 28.3 lakh-Worth-two-wheeled