ಕಾರ್ಮೋರೆಂಟ್ , ಈಗ್ರೆಟ್ ಜಾತಿಯ ಪಕ್ಷಿಗಳನ್ನ ಕೊಂದಿದ್ದ ವ್ಯಕ್ತಿಯ ಬಂಧನ.

ಮೈಸೂರು,ಆಗಸ್ಟ್,9,2023(www.justkannada.in):  ಮರದಲ್ಲಿ ಗೂಡು ಕಟ್ಟಿಕೊಂಡಿದ್ದ ಕಾರ್ಮೋರೆಂಟ್ ಹಾಗೂ ಈಗ್ರೆಟ್ ಜಾತಿಯ ಪಕ್ಷಿಗಳನ್ನ ಕೊಂದಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿಂದುವಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಇದೇ ಗ್ರಾಮದ ರವಿ ಬಂಧಿತ ಆರೋಪಿ. ಸಿಂದುವಳ್ಳಿ ಗ್ರಾಮದ ಸಮೀಪ ಮರದಲ್ಲಿ ಕಾರ್ಮೋರೆಂಟ್ ಮತ್ತು ಈಗ್ರೆಟ್ ಪಕ್ಷಿಗಳು ಗೂಡು ಕಟ್ಟಿದ್ದವು. ಈ ವೇಳೆ ಅದೇ ಗ್ರಾಮದ ಬಂಧಿತ ಆರೋಪಿ ರವಿ ಗೂಡನ್ನ ಕಿತ್ತು ಹಾಕಿ. 24ಮರಿಗಳನ್ನ ಸಾಯಿಸಿ ,7ಮರಿಗಳಿಗೆ ಗಾಯಗೊಳಿಸಿದ್ದ. ಗಾಯಗೊಂಡಿದ್ದ ಮರಿಗಳಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಸಂಬಂಧ ಅರಣ್ಯಧಿಕಾರಿಗಳು ಪ್ರಕರಣ  ದಾಖಲಿಸಿಕೊಂಡು ವ್ಯಕ್ತಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ RFO ಸುರೇಂದ್ರ, DRFO ಮೋಹನ್ ಕುಮಾರ್, ಗಸ್ತುಪಾಲಕ ರಾಜೇಗೌಡ, ಚಾಲಕ ಗಣೇಶ್ ಭಾಗಿಯಾಗಿದ್ದರು. ಈ ಕುರಿತು ನಂಜನಗೂಡು ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Arrest – person – killed -cormorant – egret- birds