ಮಂಡ್ಯ,ಜನವರಿ,10,2021(www.justkannada.in) : ನನಗೆ ಸಂಬಂಧಪಡದ ವಿಚಾರವನ್ನು ಕೇಳಬೇಡಿ. ಯಾರಪ್ಪ ಅದು?, ಅವರು ಯಾರು ಅಂತ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶ್ರೀರಂಗಪಟ್ಟಣದ ನೇರಳಕೆರೆ ಗ್ರಾಮದಲ್ಲಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ಕುರಿತು ಮಾಧ್ಯಮದವರ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ನಾನು ರಾಜ್ಯ ಸರ್ಕಾರದ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನನ್ನ ಉದ್ದೇಶ ಇರೋದು ಎರಡೂವರೆ ವರ್ಷ ಸರ್ಕಾರದ ಅವಧಿ ಮುಕ್ತಾಯಗೊಂಡ ನಂತರ, ರಾಜ್ಯದಲ್ಲಿ ಜನತಾದಳ ಸರ್ಕಾರ ಅಸ್ಥಿತ್ವಕ್ಕೆ ತರೋದು ಎಂದಿದ್ದಾರೆ.
![actress,Radhika,CCB,Notice,With,regard,Former CM,H.D.Kumaraswamy,Responded](https://www.justkannada.in/wp-content/uploads/2021/01/hdss.jpg)
2023 ಕರ್ನಾಟಕದ ರಾಜ್ಯ ಜನತಾದಳದ ರಾಜ್ಯ. ಜನತಾ ರಾಜ್ಯ. ಅದನ್ನು ತರೋದಕ್ಕೆ ಏನ್ ಬೇಕೋ ಅದರ ಬಗ್ಗೆ ಚಿಂತೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
key words : actress-Radhika-CCB-Notice-With-regard-Former CM-H.D. Kumaraswamy-Responded