ಸಾನ್ವಿ ಬರೆದ ಕನ್ನಡ ಪತ್ರ ಕಂಡು ಖುಷಿಪಟ್ಟ ಅಭಿಮಾನಿಗಳು

ಬೆಂಗಳೂರು, ನವೆಂಬರ್ 02, 2019 (www.justkannada.in): ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಿಗೆ ಶಾನ್ವಿ ಪತ್ರ ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಾಹೇಬ, ಮಫ್ತಿ, ತಾರಕ್ ಚಿತ್ರದಲ್ಲಿ ಬಳಿಕ ಗೀತಾ ಕನ್ನಡದಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನಟಿ ಸಾನ್ವಿ ಇದೀಗ ಕನ್ನಡ ಕಲಿತ್ತಿದ್ದಾರೆ. ಕನ್ನಡದಲ್ಲಿ ಪತ್ರವನ್ನು ಬರೆದು ರಾಜ್ಯೋತ್ಸವದಂದು ಟ್ವಿಟ್ಟರ್ ನಲ್ಲಿ ಪೋಷ್ಟ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿಕೊಟ್ಟಿದೆ.

ಈಗ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿರುವ ಅವರು ತಮ್ಮ ಪಾತ್ರಕ್ಕೆ ಅವರೇ ಸ್ವತಃ ಡಬ್ ಮಾಡಿದ್ದಾರೆ. ಇದಕ್ಕಾಗಿ ಅವರು ಇಷ್ಟ ಪಟ್ಟು ಕನ್ನಡ ಕಲಿತಿದ್ದಾರೆ.