Thursday, August 13, 2026

BDA Apartments

Home Front Page ಸಿಎಂ ಬೊಮ್ಮಾಯಿಗೆ ನಟ ಸುದೀಪ್ ಬೆಂಬಲ ವಿಚಾರ: ವ್ಯಂಗ್ಯವಾಡಿದ ರಣದೀಪ್ ಸಿಂಗ್ ಸುರ್ಜೇವಾಲ.

ಸಿಎಂ ಬೊಮ್ಮಾಯಿಗೆ ನಟ ಸುದೀಪ್ ಬೆಂಬಲ ವಿಚಾರ: ವ್ಯಂಗ್ಯವಾಡಿದ ರಣದೀಪ್ ಸಿಂಗ್ ಸುರ್ಜೇವಾಲ.

ಬೆಂಗಳೂರು,ಏಪ್ರಿಲ್,5,2023(www.justkannada.in):  ಸಿಎಂ ಬಸವರಾಜ ಬೊಮ್ಮಾಯಿಗೆ ನಟ ಕಿಚ್ಚ ಸುದೀಪ್ ಬೆಂಬಲ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಸಿಂಗ್ ಸುರ್ಜೇವಾಲ,  ಕರ್ನಾಟಕದ ಭವಿಷ್ಯವನ್ನು  ನಿರ್ಧರಿಸುವವರು ಸಿನಿಮಾತಾರೆಯರಲ್ಲ. ನಟರು ಯಾರನ್ನ ಬೆಂಬೆಲಿಸಬೇಕು ಎಂದು ಆಯ್ಕೆ ಮಾಡಿಕೊಳ್ಳಲು  ಸ್ವತಂತ್ರರು . ಕೆಲವೊಮ್ಮೆ ಐಟಿ ಇಡಿ ಅಥವಾ ಬೇರೆ ರೀತಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಐಟಿ, ಇಡಿ ಒತ್ತಡದಿಂದಲೂ ಒಪ್ಪಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಬಿಜೆಪಿ ದಿವಾಳಿತನ ಸ್ಪಷ್ಟವಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ, ಬಿಜೆಪಿ ನಾಯಕರ ಮಾತನ್ನ ಯಾರೂ ಕೇಳ್ತಿಲ್ಲ. ಈಗ ಪ್ರೇಕ್ಷಕರನ್ನ ಸೆಳೆಯಲು ಸಿನಿತಾರೆಯರನ್ನ ಅವಲಂಬಿಸಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಕುಟುಕಿದರು.

Key words: Actor -Sudeep -supports -CM Bommai- Randeep Singh Surjewala -tong