Friday, September 11, 2026

BDA Apartments

Home Cinema ಸಚಿವ ಶಿವರಾಂ ಹೆಬ್ಬಾರ್ ವಿರುದ್ಧ ನಟ ಚೇತನ್ 1 ರೂ. ಮಾನನಷ್ಟ ಮೊಕದ್ದಮ್ಮೆ

ಸಚಿವ ಶಿವರಾಂ ಹೆಬ್ಬಾರ್ ವಿರುದ್ಧ ನಟ ಚೇತನ್ 1 ರೂ. ಮಾನನಷ್ಟ ಮೊಕದ್ದಮ್ಮೆ

ಬೆಂಗಳೂರು, ಜೂನ್ 26, 2021 (www.justkannada.in)ಸಚಿವ ಶಿವರಾಂ ಹೆಬ್ಬಾರ್ ವಿರುದ್ಧ ನಟ ಚೇತನ್, ಸಿಟಿ ಸಿವಿಲ್ ಕೋರ್ಟ್ ನಲ್ಲಿ 1 ರೂಪಾಯಿಯ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದಾರೆ.

ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಚೇತನದ ಮೊಕದ್ದಮ್ಮೆ ಹೂಡಿದ್ದಾರೆ. ದೂರಿನ ವಿಚಾರಣೆಯನ್ನ ನೆಡಿಸಿದಂತ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು, ಸಚಿವರಿಗೆ ತುರ್ತು ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜುಲೈ.4ಕ್ಕೆ ಮುಂದೂಡಿದ್ದಾರೆ.

ನಟ ಚೇತನ್ ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಪುಡ್ ಕಿಟ್ ವಿತರಣೆಯ ಕುರಿತಂತೆ ಟ್ವಿಟ್ ನಲ್ಲಿ ಟ್ವಿಟ್ ಮಾಡಿದ್ದರು. ಈ ವಿಚಾರವಾಗಿ ಸಚಿವ ಶಿವರಾಮ್ ಮಾತನಾಡಿದ್ದರು.