Tuesday, August 11, 2026

BDA Apartments

Home Front Page ಮತಾಂಧತೆ ಮುಳ್ಳು ಹಿಂದೂ ಸಮಾಜಕ್ಕೆ ಚುಚ್ಚುತ್ತೆ: ಅಸ್ಪೃಶ್ಯತೆ ನಿವಾರಿಸಲು ಸ್ವಾಮೀಜಿಗಳು ಮುಂದಾಗಿ- ಮಾಜಿ ಸಚಿವ ಸಿ.ಟಿ...

ಮತಾಂಧತೆ ಮುಳ್ಳು ಹಿಂದೂ ಸಮಾಜಕ್ಕೆ ಚುಚ್ಚುತ್ತೆ: ಅಸ್ಪೃಶ್ಯತೆ ನಿವಾರಿಸಲು ಸ್ವಾಮೀಜಿಗಳು ಮುಂದಾಗಿ- ಮಾಜಿ ಸಚಿವ ಸಿ.ಟಿ ರವಿ.

ಬೆಂಗಳೂರು,ಮೇ,9,2022(www.justkannada.in): ಜಾತಿ ಅಸ್ಮಿತೆಯಾದರೆ ಜಾತಿಯತೆ ಅಪರಾಧ.  ಅಸ್ಪೃಶ್ಯತೆ ಹಿಂದೂ ಸಮಾಜನವನ್ನ ದುರ್ಬಲಗೊಳಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಅಸ್ಪೃಶ್ಯತೆ ಹಿಂದೂ ಸಮಾಜನವನ್ನ ದುರ್ಬಲಗೊಳಿಸುತ್ತಿದೆ.  ಹಿಂದೂ ಸಮಾಜಕ್ಕೆ ಜಾತಿಯತೆಯ ಮುಳ್ಳು ಚುಚ್ಚಿದೆ. ಮತಾಂಧತೆ ಮುಳ್ಳು ಹಿಂದೂ ಸಮಾಜಕ್ಕೆ ಚುಚ್ಚುತ್ತೆ. ಸ್ವಾಮೀಜಿಗಳು ಅಸ್ಪೃಶ್ಯತೆ ನಿವಾರಿಸಲು ಮುಂದಾಗಬೇಕು ಎಂದು ಸಿ.ಟಿ ರವಿ ತಿಳಿಸಿದರು.

ಶಾಸಕ ಸಿ.ಟಿ ರವಿಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ,  ಮನಷ್ಯತ್ವ ಇಲ್ಲದ ಕಡೆ ಸಮಾಜ ಅಭಿವೃದ್ದಿಯಾಗಲ್ಲ ಶಾಂತಿ ಸಾಮರಸ್ಯ ಇದ್ದಲ್ಲಿ ಅಭಿವೃದ್ದಿ. ಜಾತಿ ವ್ಯವಸ್ಥೇ ನಾವು ಮಾಡಿಲ್ಲ.  ಜಾತಿ ವ್ಯವಸ್ಥೆ ಮೊದಲೇ ಇತ್ತು. ಜಾತಿ ವ್ಯವಸ್ಥೆ ನಾವು ಮಾಡಿಕೊಂಡಿಲ್ಲ. ಇಂದಿಗೂ ಜಾತಿ ವ್ಯವಸ್ಥೆ ಹೋಗಿಲ್ಲ. ಅದು ಆಳವಾಗಿ ಬೇರೂರಿದೆ, ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠ ಎಂದು ನುಡಿದರು.

Key words: former minister-CT Ravi-former CM- Siddaramaiah