Thursday, July 30, 2026

BDA Apartments

Home Front Page ಮೈಸೂರು ಗ್ಯಾಂಗ್ ರೇಪ್ ಕುರಿತು ಸದನದಲ್ಲಿ ವಾಗ್ವಾದ: ವಿಪಕ್ಷ ನಾಯಕರ ಪ್ರಶ್ನಗೆ ಖಡಕ್ ಉತ್ತರ ಕೊಟ್ಟ...

ಮೈಸೂರು ಗ್ಯಾಂಗ್ ರೇಪ್ ಕುರಿತು ಸದನದಲ್ಲಿ ವಾಗ್ವಾದ: ವಿಪಕ್ಷ ನಾಯಕರ ಪ್ರಶ್ನಗೆ ಖಡಕ್ ಉತ್ತರ ಕೊಟ್ಟ ಸಿಎಂ ಬೊಮ್ಮಾಯಿ.

ಬೆಂಗಳೂರು,ಸೆಪ್ಟಂಬರ್,22,2021(www.justkannada.in): ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಇಂದು ಸದನದಲ್ಲಿ ಪ್ರತಿಧ್ವನಿಸಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಸಮರ ನಡೆಯಿತು.

ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನ ತರಾಟೆ ತೆಗೆದುಕೊಂಡ ವಿಪಕ್ಷ ನಾಯಕ ಸಿದ್ಧರಾಮಯ್ಯ,  ಸರ್ಕಾರ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿಲ್ಲ. ಘಟನೆ ನಡದ ನಂತರ ಪೊಲೀಸರು ಪ್ರಕರಣ ದಾಖಲಿಸಲು ತಡಮಾಡಿದ್ದು ಯಾಕೆ..? ಪೊಲೀಸರು ಸಂತ್ರಸ್ತ ಯುವತಿಯ ಹೇಳಿಕೆ ದಾಖಲಿಸಿಲ್ಲ. ಕೇಸ್ ಮುಚ್ಚಿ ಹಾಕಲು ಸರ್ಕಾರ ಯತ್ನಿಸಿದೆ ಎಂದು ಆರೋಪಿಸಿದರು.

ಸಿದ್ಧರಾಮಯ್ಯ ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದಕ್ಕೆ ಆರೋಪಿಗಳನ್ನ ಬಂಧಿಸಿರುವುದೇ ಸಾಕ್ಷಿ.  ಕೇಸ್ ಮುಚ್ಚಿ ಹಾಕುತ್ತಿಲ್ಲ. ಜಡ್ಜ್ ಎದುರು ಯುವತಿ ಹೇಳಿಕೆ ದಾಖಲಾಗಿದೆ ಎಂದರು.

ಅಲ್ಲದೆ  ಕಾಂಗ್ರೆಸ್ ಅವಧಿಯಲ್ಲೇ ಹೆಚ್ಚು ಅತ್ಯಾಚಾರ ಪ್ರಕರಣ ನಡೆದಿದೆ. 2013-16ರಲ್ಲೆ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿದೆ ಎಂದು ಸಿಎಂ ಬೊಮ್ಮಾಯಿ ಎನ್ ಸಿಆರ್ ರಿಪೋರ್ಟ್ ಓದಿದರು.

ಬೆಂಗಳೂರಿನಲ್ಲಿ ನಿನ್ನೆ ಒಂದು ಪ್ರಕರಣ ದಾಖಲಾಗಿದೆ. ಸತ್ಯ ಗೊತ್ತಾದ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: CM- Bommai –  opposition- leaders- Mysore -gang rape-case