Thursday, August 13, 2026

BDA Apartments

Home Front Page ಪತ್ರಕರ್ತರಿಗೂ ವಿಶೇಷ ಪ್ಯಾಕೇಜ್ ನೀಡಿ, ಬಾಕಿ ಇರುವ 50 ಕೋಟಿ ರೂ. ಜಾಹೀರಾತು ಬಿಲ್ ಕೂಡಲೇ...

ಪತ್ರಕರ್ತರಿಗೂ ವಿಶೇಷ ಪ್ಯಾಕೇಜ್ ನೀಡಿ, ಬಾಕಿ ಇರುವ 50 ಕೋಟಿ ರೂ. ಜಾಹೀರಾತು ಬಿಲ್ ಕೂಡಲೇ ಪಾವತಿಸಿ : ಸಿಎಂಗೆ ಮನವಿ ಮಾಡಿದ ಕೆಯುಡಬ್ಲುಜೆ.

 

ಬೆಂಗಳೂರು, ಮೇ 13, 2020 : (www.justkannada.in news ) ಕರೊನಾ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಪತ್ರಕರ್ತರನ್ನು ವಿಶೇಷ ಪ್ಯಾಕೇಜ್ ನಲ್ಲಿ ಸೇರಿಸಿ ಆರ್ಥಿಕ ನೆರವು ನೀಡಬೇಕು ಮತ್ತು ಒಂದು ವರ್ಷದಿಂದ ಬಾಕಿ ಇರುವ 50 ಕೋಟಿ ರೂ. ಮಾಧ್ಯಮಗಳ ಜಾಹೀರಾತು ಬಿಲ್ ಕೂಡಲೇ ಪಾವತಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

bangalore-media-bill-pending-corona-pakage-for-journalist-kuwj-to-cm

ಪತ್ರಕರ್ತರ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಬಿಎಸ್ ವೈ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಿದ ಸಿಎಂ ಯಡಿಯೂರಪ್ಪ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲಾಯಿತು ಎಂದು ಸಂಘದ ಪ್ರಕಟಣೆ ತಿಳಿಸಿದೆ.

key words : bangalore-media-bill-pending-corona-pakage-for-journalist-kuwj-to-cm