Wednesday, July 29, 2026

BDA Apartments

Home Front Page ಮಧ್ಯಾಂತರ ಚುನಾವಣೆಗೆ ಹೋಗುವ ಸ್ಥಿತಿ ಬಿಜೆಪಿಗೆ ಇಲ್ಲ- ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ….

ಮಧ್ಯಾಂತರ ಚುನಾವಣೆಗೆ ಹೋಗುವ ಸ್ಥಿತಿ ಬಿಜೆಪಿಗೆ ಇಲ್ಲ- ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ….

ಬೆಂಗಳೂರು,ಮೇ,29,2019(www.justkannada.in):  ನಾವಾಗಿಯೇ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಕೈ ಹಾಕಲ್ಲ. ಸದ್ಯ ಬಿಜೆಪಿಗೆ ಮಧ್ಯಾಂತರ ಚುನಾವಣೆಗೆ ಹೋಗುವ ಸ್ಥಿತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಾವಾಗಿಯೇ ಸರ್ಕಾರವನ್ನ ಬೀಳಿಸಲ್ಲ. ಜೆಡಿಎಸ್ ಕಾಂಗ್ರೆಸ್  ನಾಯಕರೇ ಕಚ್ಚಾಡಿಕೊಂಡು ಸರ್ಕಾರ  ಬೀಳುತ್ತದೆ. ನಂತರ  ನಾವು ಬಿಜೆಪಿ ಸರ್ಕಾರ  ರಚಿಸಲು ಮುಂದಾಗುತ್ತೇವೆ. ಮಧ್ಯಾಂತರ ಚುನಾವಣೆಗೆ ಹೋಗುವ ಸ್ಥಿತಿ ಬಿಜೆಪಿಗೆ ಇಲ್ಲ ಎಂದರು.

ಜಿಂದಾಲ್ ಕಂಪನಿಗೆ ಸರ್ಕಾರದಿಂದ ಭೂಮಿ ನೀಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ, ಸರ್ಕಾರದಿಂದ ಭೂಮಿ ನೀಡುವ ಬಗ್ಗೆ ನಮ್ಮ ವಿರೋಧವಿದೆ. ಜೂನ್ 5 ರಂದು ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮುಂದಿನ ಹೋರಾಟ ಕುರಿತು  ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

Key words: BJP does not have the chance to go for a mid-term poll-Former CM BS Yeddyurappa

#BSYeddyurappa  #BJP #bangalore #midtermpoll