Tuesday, September 1, 2026

BDA Apartments

Home Front Page ರೈತರ ಜಮೀನಿಗೆ ಸಿಎಂ ಡಿಕೆಶಿ ಭೇಟಿ, ಬೆಳೆಹಾನಿ ವೀಕ್ಷಣೆ

ರೈತರ ಜಮೀನಿಗೆ ಸಿಎಂ ಡಿಕೆಶಿ ಭೇಟಿ, ಬೆಳೆಹಾನಿ ವೀಕ್ಷಣೆ

ಗದಗ,ಸೆಪ್ಟಂಬರ್,1,2026 (www.justkannada.in):  ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ಗದಗ ಜಿಲ್ಲೆಯಲ್ಲಿ ಬರ ಪ್ರವಾಸ ಕೈಗೊಂಡು ಬೆಳೆಹಾನಿ ವೀಕ್ಷಿಸಿದರು.

ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದಲ್ಲಿ ರೈತ ಶ್ರೀನಾಥ್  ಪಾಟೀಲ್ ಅವರ ಹೊಲಕ್ಕೆ ಸಿಎಂ ಡಿಕೆ ಶಿವಕುಮಾರ್  ಭೇಟಿ ನೀಡಿ ಹತ್ತಿ, ಶೇಂಗಾ, ಮೆಣಸಿನಕಾಯಿ ಬೆಳೆಯನ್ನ ವೀಕ್ಷಿಸಿದರು, ನಂತರ ರೈತರೊಂದಿಗೆ ಕೆಲ ಹೊತ್ತು ಸಮಾಲೋಚನೆ ನಡೆಸಿದರು.

ಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ಶಾಸಕ ಸಿ.ಸಿ ಪಾಟೀಲ್, ಮಾಜಿ ಸಚಿವ ಹೆಚ್ ಕೆ ಪಾಟೀಲ್ ಶಾಸಕ ಕೋನರೆಡ್ಡಿ ಹಾಗೂ ಸ್ಥಳೀಯ ಮುಖಂಡರು ಸಾಥ್  ನೀಡಿದರು. ರಾಜ್ಯ ಸರ್ಕಾರ ಈಗಾಗಲೇ 102 ತಾಲ್ಲೂಕುಗಳನ್ನ ಬರ ಪೀಡಿತ ಎಂದು ಘೋಷಣೆ ಮಾಡಿದೆ.

Key words: CM DK Shivakumar, Drought, farmers, crop