Wednesday, August 26, 2026

BDA Apartments

Home Front Page ಬಿ.ನಾಗೇಂದ್ರ ರಾಜೀನಾಮೆ ಬಗ್ಗೆ ಮಾಹಿತಿ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ

ಬಿ.ನಾಗೇಂದ್ರ ರಾಜೀನಾಮೆ ಬಗ್ಗೆ ಮಾಹಿತಿ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಆಗಸ್ಟ್,26,2026 (www.justkannada.in): ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡುವ ಬಗ್ಗೆ ಮಾಹಿತಿ ಇಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಈ ಬಗ್ಗೆ ನಾನು ಉತ್ತರ ಕೊಡುವ ಸ್ಥಾನದಲ್ಲಿ ಇಲ್ಲ. ಸಚಿವ ನಾಗೇಂದ್ರ ಬಗ್ಗೆ ಅವರು ನನ್ನ ಬಳಿ ಏನೂ ಚರ್ಚೆ ಮಾಡಿಲ್ಲ. ಅವರೆಲ್ಲ ಎತ್ತರ ಸ್ಟೇಜ್ ನಲ್ಲಿದ್ದಾರೆ.  ಅವರೇ ಉತ್ತರ ಕೊಡುತ್ತಾರೆ ಎಂದರು.

ಸಹಜವಾಗಿಯೇ ವಿಪಕ್ಷಗಳು ರಾಜಕೀಯ ಲಾಭ ಪಡೆದುಕೊಳ್ಳುತ್ತಾರೆ.  ನಾಗೇಂದ್ರ ರಾಜೀನಾಮೆ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ.  ನಮ್ಮ ಜೊತೆಯಂತೂ ಸಿಎಂ ಆಗಲಿ ಯಾರು ಚರ್ಚಿಸಿಲ್ಲ. ಅಧ್ಯಕ್ಷರು ಸಿಎಂ ನಮಗಿಂತ ಮೇಲಿದ್ದಾರೆ ಅವರೇ ಉತ್ತರಿಸುತ್ತಾರೆ ಎಂದು ತಿಳಿಸಿದರು.

Key words: No information, about, B. Nagendra, resignation, Minister, Sathish Jarkiholi