ದಸರಾದಲ್ಲಿ ಕಂಬಳ ಆಯೋಜನೆ ಬಗ್ಗೆ ಸಿಎಂ ತೀರ್ಮಾನ ಮಾಡ್ತಾರೆ- ಸಚಿವ ಯತೀಂದ್ರ ಸಿದ್ದರಾಮಯ್ಯ

ಕಲಬುರಗಿ,ಜುಲೈ,13,2026 (www.justkannada.in): ದಸರಾದಲ್ಲಿ ಕಂಬಳ ಆಯೋಜನೆ ಬಗ್ಗೆ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಸಚಿವ ಯತೀಂದ್ರ ಸಿದ್ದರಾಮಯ್ಯ, ಕಂಬಳ ಬಗ್ಗೆ ಹಲವು ರೀತಿಯಲ್ಲಿ ಅಭಿಪ್ರಾಯಗಳು ಬಂದಿದೆ. ಆದರೆ ಸಿಎಂ ನಿರ್ಧರಿಸಿದ ಹಿನ್ನೆಲೆಯಲ್ಲಿ ಕಂಬಳ ನಡೆಯುತ್ತದೆ ಎಂದರು.

ಅಯಾ ಭಾಗದ ಸಂಸ್ಕೃತಿ ಕ್ರೀಡೆ ಪ್ರದರ್ಶಿಸುವುದು ತಪ್ಪಿಲ್ಲ. ಆದರೆ ಅದಕ್ಕಾಗಿ ಮರಗಳನ್ನ ಕಡಿದಿದ್ದು ತಪ್ಪು. ಮರಗಳನ್ನ ಕಡಿಯದಂತೆ ನೋಡಿಕೊಳ್ಳುವೆ ಎಂದು  ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Key words: Kambala, Mysore Dasara, Minister, Yathindra Siddaramaiah