ಬೆಂಗಳೂರು,ಜುಲೈ,6,2026 (www.justkannada.in): ಆರ್ ಎಸ್ ಎಸ್ ನವರು ಪಥಸಂಚಲನಕ್ಕೆ ಅನುಮತಿ ತೆಗೆದುಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್ ನವರು ಪಥಸಂಚಲನಕ್ಕೆ ಅನುಮತಿ ತೆಗೆದುಕೊಳ್ಳಬೇಕು. ಜಸ್ಟ್ ಈಗ ಮೋಹನ್ ಭಾಗವತ್ ಗೆ ಪತ್ರ ಬರೆದಿದ್ದೇನೆ 100 ವರ್ಷದ ಸಂಘಟನೆ ಕಾಗದಗಳು ಎಲ್ಲೋ ಇರಬಹುದು ಹುಡುಕುತ್ತಿದ್ದಾರೆ ಬರಲಿ. ಇಷ್ಟು ಕೇಳಿದಕ್ಕೆ ನನ್ನ ವೈಯಕ್ತಿಕ ಮಾಹಿತಿ ಕೆದಕುತ್ತಿದ್ದಾರೆ. ಪ್ರಿಯಾಂಕ್ ಯಾರನ್ನು ಮದುವೆಯಾಗಿದ್ದು? ಮಕ್ಕಳು ಯಾರು? ಪ್ರಿಯಾಂಕ್ ಕಪ್ಪಗಿದ್ದಾಣನಾ? ಬೆಳ್ಳಗಿದ್ದಾನಾ? ಎಲ್ಲವನ್ನೂ ಕೆದಕುತ್ತಿದ್ದಾರೆ ಇದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ ಎಂದರು.
ಎಸ್ ಐಆರ್ ಸಂಬಂಧ ಬಿಜೆಪಿ-ಜೆಡಿಎಸ್ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ದೂರು ಕೊಡೋದು ಒಂದು ನಾಟಕ. ಪಶ್ಚಿಮ ಬಂಗಾಳದಲ್ಲಿ ಮೊದಲು ಪ್ರತಿಭಟನೆ ಮಾಡಿದ್ದೇ ಬಿಜೆಪಿ ಅ ಮೇಲೆ ಹೊರಗಿನ ಅಧಿಕಾರಿಗಳನ್ನು ತರುವುದು ಇವರ ಪ್ಲಾನ್ ಇದೆಲ್ಲವೂ ಒಂದು ಗೇಮ್ ಪ್ಲಾನ್ ಎಂದು ಟೀಕಿಸಿದರು.
Key words: Permission, RSS, processions, Home Minister, Priyank Kharge











