ಬೆಳಗಾವಿ,ಜುಲೈ,1,2026 (www.justkannada.in): ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಕೃಷಿಗೆ ಕುಡಿಯುವ ನೀರಿಗೆ ಸಂಕಷ್ಟ, ಬರಗಾಲದ ಛಾಯೆ ಆವರಿಸುವ ಸಾಧ್ಯತೆ ಇದ್ದು ಸರ್ಕಾರ ಮೋಡ ಬಿತ್ತನೆಗೆ ಮುಂದಾಗಲಿದೆಯೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಮೋಡ ಬಿತ್ತನೆಗೆ ಚಿಂತನೆ ಇಲ್ಲ. ಅವಕಾಶ ಬಂದಾಗ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬರ ಪೀಡಿತ ಜಿಲ್ಲೆ ತಾಲ್ಲೂಕು ಘೋಷಣೆಗೆ ಮಾನದಂಡ ಇದೆ, ಎಷ್ಟ ದಿನ ಮಳೆ ಆಗಿಲ್ಲ. ಹಾಗೆ ಬೆಳೆ ನೀರಿನ ಮಟ್ಟ ಪರಿಶೀಲನೆ, ಎಲ್ಲವನ್ನೂ ಪರಿಶೀಲನೆ ಮಾಡಿ ಮುಂದಿನ ಪ್ಲಾನ್ ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
Key words: No plans, cloud seeding, DCM, Parameshwar






