ತುಮಕೂರು,ಜೂನ್,26,2026 (www.justkannada.in): ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತವಾಗಿದೆ.
ತುಮಕೂರು ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದ್ದು, ಕೆಇಬಿ ಇಂಜಿನಿಯರ್ಸ್ ಸಂಘದ ಆವರಣದಲ್ಲಿ ನಾಲ್ವರು ದಲಿತ ಕಾರ್ಮಿಕರಿಂದ ಬರಿಗೈಯಲ್ಲಿ ಶೌಚಗುಂಡಿಯ ಮಲ ಬಾಚಿಸಿ, ಟ್ರಾಕ್ಟರ್ ಗೆ ತುಂಬಿಸಿದ ಆರೋಪ ಕೇಳಿಬಂದಿದೆ.
ನಂದೀಶ್, ಅರುಣ, ಮೂರ್ತಿ ನಾಯ್ಕ ಮತ್ತು ನವೀನ್ ಎಂಬ ಕಾರ್ಮಿಕರು ಕಳೆದ ಮೂರು ದಿನಗಳಿಂದ ಈ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Key words: carrying feces, Tumakur, DCM Parameshwar






