ಲಂಚ ಪ್ರಕರಣ: ಪಿಎಸ್‌ ಐ ಸೇರಿದಂತೆ ಇಬ್ಬರ ಜಾಮೀನು ಅರ್ಜಿ ತಿರಸ್ಕಾರ

ಯಡ್ರಾಮಿ, ಜೂನ್, 22,2026 (www.justkannada.in):  20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ ಐ ವಿಶ್ವನಾಥ ಮುದರೆಡ್ಡಿ ಹಾಗೂ ಎಸ್‌ ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಗುರುವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಬಳಿಕ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆರೋಪಿತರ ಪರವಾಗಿ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿಗೆ ಲೋಕಾಯುಕ್ತ ಪರ ವಕೀಲರು ಆಕ್ಷೇಪಣೆ ಸಲ್ಲಿಸಿ, ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಎಲ್. ಲಕ್ಷ್ಮಿನಾರಾಯಣ ಅವರು ಎರಡೂ ಕಡೆಯ ವಾದ ಆಲಿಸಿದ ಬಳಿಕ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದರು.

ಲೋಕಾಯುಕ್ತ ಪರವಾಗಿ ಎಪಿಪಿ ಎಸ್.ಎಸ್. ಚಾಂದ್ ಕೌಟೆ ವಾದ ಮಂಡಿಸಿದರೆ, ಆರೋಪಿತರ ಪರವಾಗಿ ವಕೀಲ ಬಾಬುರಾವ್ ವಾದಿಸಿದರು. ನ್ಯಾಯಾಲಯದ ಆದೇಶದೊಂದಿಗೆ ಇಬ್ಬರೂ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಲಿದ್ದಾರೆ.

ENGLISH SUMMARY…

Bribe Case: Bail Plea of PSI, Staff Rejected

Yadrami, June 22: A court has rejected the bail applications of PSI Vishwanath Mudareddy and SB staff member Siddanna Biradar, who were arrested by Lokayukta officials while allegedly accepting a bribe of ₹20,000.

The Lokayukta opposed the bail, arguing that the investigation is still underway and granting bail at this stage could affect the probe. After hearing both sides, Judge B.L. Lakshminarayana dismissed the bail pleas.

The accused will continue to remain in judicial custody.

#Lokayukta #BriberyCase #PSI #KarnatakaNews #JudicialCustody #AntiCorruption #BreakingNews

Key words: Bribery case, Bail application, PSI, two, rejected