ಅತ್ಯುತ್ತಮ ಜನಮೆಚ್ಚುವ ಆಡಳಿತ ಜನರಿಗೆ ನೀಡ್ತೇವೆ- ಸಚಿವ ಯು.ಟಿ ಖಾದರ್

ಹಾಸನ,ಜೂನ್,13,2026 (www.justkannada.in): ನಾವು ಅತ್ಯುತ್ತಮವಾದ ಜನಮೆಚ್ಚುವ ಆಡಳಿತವನ್ನು ಜನರಿಗೆ ನೀಡುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯು.ಟಿ ಖಾದರ್,  ಸಚಿವ ಸ್ಥಾನ ಯಾರಿಗೆ ನೀಡಬೇಕು ಎಂದು ನಮ್ಮ ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಸಚಿವ ಸ್ಥಾನ ಖಾತೆ ಹಂಚಿಕೆ ಬಗ್ಗೆ ಯಾವುದೇ ಗೊಂದಲವಿಲ್ಲ. ಸರ್ಕಾರ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ. ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ಜನರ ವಿಶ್ವಾಸ ಗಳಿಸುತ್ತದೆ ಕಾಂಗ್ರೆಸ್ ಪಕ್ಷ  ಅದಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.

ಸ್ಪೀಕರ್ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಈ ಬಗ್ಗೆ ಪಕ್ಷ ಹಾಗೂ ಪಕ್ಷದ ಹಿರಿಯರು ತೀರ್ಮಾನ ಮಾಡುತ್ತಾರೆ.  ಉತ್ತಮವಾಧ ಸಭಾಧ್ಯಕ್ಷರು ಹಾಗೂ ಮಂತ್ರಿಗಳ ಸರ್ಕಾರ ಇರುತ್ತೆ ನಾವು ಶಾಸಕರು ಪ್ರತಿಪಕ್ಷ ನಾಯಕರನ್ನ ವಿಶ್ವಾಸಕ್ಕೆ ಪಡೆದುಕೊಂಡು ಅತ್ಯುತ್ತಮವಾದ ಜನಮೆಚ್ಚುವ ಆಡಳಿತವನ್ನು ಜನರಿಗೆ ನೀಡುತ್ತೇವೆ ಎಂದು ಸಚಿವ ಯು.ಟಿ ಖಾದರ್ ತಿಳಿಸಿದರು.

Key words:  provide, best, popular, administration. people, Minister, U.T. Khader