ಖರ್ಗೆ ಸಿಎಂ ಆದ್ರೆ ಸ್ವಾಗತ ಎಂಬ ಹೇಳಿಕೆ: MLC ಯತೀಂದ್ರ ಪ್ರತಿಕ್ರಿಯಿಸಿದ್ದು ಹೀಗೆ?

ರಾಯಚೂರು,ಏಪ್ರಿಲ್,29,2026 (www.justkannada.in):  ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಸಂತೋಷ ಸ್ವಾಗತಿಸುತ್ತೇವೆ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆ ಕುರಿತು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಯತೀಂಧ್ರ ಸಿದ್ದರಾಮಯ್ಯ,  ಸಿಎಂ ಸಿದ್ದರಾಮಯ್ಯರನ್ನು  ಹೈಕಮಾಂಡ್ ಕೆಳಗಿಸಿದರೆ   ಆ ಪ್ರಶ್ನೆ ಬರುತ್ತದೆ.  ಆ ತರಹ ಆದಾಗ ಖಂಡಿತ ಮಾತನಾಡುತ್ತೇನೆ.  ಹೈಕಮಾಂಡಗ ನಿರ್ಧಾರ ಸ್ವಾಗತಿಸುತ್ತೇವೆ ಎಂದರು.

ಮೇ15ರಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ವಿಚಾರ,  ನವೆಂಬರ್ ನಿಂದಲೂ ಹೇಳುತ್ತಿದ್ದಾರೆ ನಾನು ಉತ್ತರ ಕೊಡುತ್ತಿದ್ದೇನೆ  ಈಗಾಗಲೇ ಹೇಳೋದನ್ನೆಲ್ಲಾ ಹೇಳಿದ್ದೇನೆ. ಈ ಬಗ್ಗೆ ಮಾತಾಡಲ್ಲ ಈ ಬಗ್ಗೆ ಹೈಕಮಾಂಡ್ ಅಥವಾ ಸಿಎಂ ಸಿದ್ದರಾಮಯ್ಯರನ್ನೇ ಕೇಳಿ ಎಂದರು.

Key words: Kharge, CM,  statement, MLC Yatindra Siddaramaiah