Monday, September 14, 2026

BDA Apartments

ನೀರು ಬಿಡಲು ಸಾಧ್ಯವೇ ಇಲ್ಲ: ಇಂದೇ ಮೇಲ್ಮನವಿ- ಸಚಿವ ರಾಮಲಿಂಗರೆಡ್ಡಿ BDA JK_Adv BDA Adv
Home Front Page ನೀರು ಬಿಡಲು ಸಾಧ್ಯವೇ ಇಲ್ಲ: ಇಂದೇ ಮೇಲ್ಮನವಿ- ಸಚಿವ ರಾಮಲಿಂಗರೆಡ್ಡಿ

ನೀರು ಬಿಡಲು ಸಾಧ್ಯವೇ ಇಲ್ಲ: ಇಂದೇ ಮೇಲ್ಮನವಿ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಜುಲೈ,29,2026 (www.justkannada.in):  ರಾಜ್ಯದಲ್ಲಿ ನೀರಿನ ಕೊರತೆ ಇದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವೇ ಇಲ್ಲ.  ಕಾವೇರಿ ನೀರು ನಿರ್ವಹಣ ಸಮಿತಿ ನೀಡಿರುವ ಆದೇಶ ಪ್ರಶ್ನಿಸಿ ಇಂದೇ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಜಲಸಂಪನ್ಮೂಲಕ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಸಿಡಬ್ಲ್ಯುಆರ್ ಸಿ ಆದೇಶವನ್ನು ಪಾಲಿಸಲು ಸಾಧ್ಯವೇ ಇಲ್ಲ. ಸಿಡಬ್ಲ್ಯುಆರ್ ಸಿ ಆದೇಶ ನೀಡಿದರೇ ಸಿಡಬ್ಲ್ಯುಎಂಎಗೆ ಮೇಲ್ಮನವಿ ಸಲ್ಲಿಸಬೇಕು. ಹೀಗಾಗಿ ಇಂದೇ ಸಿಡಬ್ಲ್ಯುಆರ್ ಸಿ  ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸುತ್ತೇವೆ. 30 ವರ್ಷಗಳಿಂದ ಯಾವುದೇ ಸರ್ಕಾರವಿದ್ದರೂ ಒಬ್ಬರೇ ಕಾನೂನು ತಜ್ಞರಿದ್ದಾರೆ ಇನ್ಮುಂದೆ ನಮ್ಮ ವಾದವನ್ನು ಶ್ರೀರಾಮಯ್ಯನವರು ಮುಂದುವರೆಸುತ್ತಾರೆ ಎಂದರು.ನೀರು ಬಿಡಲು ಸಾಧ್ಯವೇ ಇಲ್ಲ krs

ನಮ್ಮ ರಾಜ್ಯದಲ್ಲೇ ನೀರಿನ ತೀವ್ರ ಅಭಾವ ಎದುರಾಗಿದೆ. ಶೇಕಡಾ 65.86 ರಷ್ಟು ಮಳೆಯ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದ ಒಟ್ಟು 10 ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗಾಗಿ ಕನಿಷ್ಠ 12 ಟಿಎಂಸಿ ನೀರು ಬೇಕು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ, ಎಂದರು.ಇಂದೇ ಮೇಲ್ಮನವಿ jk02_new jk02 new

ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಹಾಕಿದ ಅರ್ಜಿ ವಜಾವಾಗಿದೆ ಸಂಸತ್ ನಲ್ಲಿ ಚರ್ಚೆ ವೇಳೆ ಡ್ಯಾಂ ಕಟ್ಟಲು ಬೇರೆ ರಾಜ್ಯಗಳ ಅನುಮತಿ ಬೇಕಾಗಿಲ್ಲ ಕೇಂದ್ರ ಸರ್ಕಾರ ಎಂದಿದೆ. ತಮಿಳುನಾಡಿನಲ್ಲಿ ಕುಡಿಯುವ ನೀರಿಗೆ ತೊಂದರೆ ಇ್ಲಲ ಆಗಸ್ಟ್  ಮೊದಲ ವಾರದಲ್ಲಿ ಅಲ್ಲಿ ಮಳೆಯಾಗುತ್ತದೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: no way, release, water, Tamilnadu, Minister, Ramalingareddy