Saturday, September 5, 2026

BDA Apartments

Home Front Page ಮೀಸಲಾತಿ ಹೋರಾಟ ಆರಂಭ ಬಳಿಕ ಇಂತಹ ಬೆದರಿಕೆ: ತನಿಖೆ ನಡೆಯಲಿ- ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿ ಹೋರಾಟ ಆರಂಭ ಬಳಿಕ ಇಂತಹ ಬೆದರಿಕೆ: ತನಿಖೆ ನಡೆಯಲಿ- ಬಸವ ಜಯಮೃತ್ಯುಂಜಯ ಸ್ವಾಮೀಜಿ

ನವದೆಹಲಿ,ಏಪ್ರಿಲ್,20,2026 (www.justkannada.in):   ತಮ್ಮ ವಿರುದ್ದ ಕೇಳಿ ಬಂದಿರುವ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ಹೋರಾಟ ಆರಂಭ ಬಳಿಕ ಇಂತಹ ಬೆದರಿಕೆಗಳು ಬರುತ್ತಿವೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವಜಯಮೃತ್ಯುಂಜಯ ಸ್ವಾಮೀಜಿ, ಪ್ರಕರಣ ತನಿಖೆ  ಹಂತದಲ್ಲಿದೆ. ಹೀಗಾಗಿ ಏನು  ಮಾತನಾಡಲ್ಲ. ಪ್ರಕರಣ ಸಂಬಂಧ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.

ಮೀಸಲಾತಿ ಹೋರಾಟ ಆರಂಭಿಸಿದ ಮೇಲೆ ಇಂತಹ ಬೆದರಿಕೆ ಬರುತ್ತಿವೆ.  ನನ್ನ ಹೋರಾಟ ಹತ್ತಿಕ್ಕಲು ಯತ್ನಿಸಲಾಗುತ್ತಿದೆ. ಸತ್ಯದ ಪರ ಹೆಜ್ಜೆ ಇಡುವಾಗ ಇವು ಸಹಜ. 12ನೇ ಶತಮಾನದಿಂದಲೂ ಇಂತಹ ಪಿತೂರಿ ನಡೆಯುತ್ತಲೇ ಇವೆ. ಈ ಬಗ್ಗೆ ತನಿಖೆ ನಡೆಯಲಿ ನನ್ನ ಹೋರಾಟ ಮುಂದುವರೆಸುತ್ತೇನೆ. ಸದ್ಯ ನಾನು ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳ ಪ್ರವಾಸದಲ್ಲಿದ್ದೇನೆ ಎಂದರು.

Key words: Sexual harassment, allegations, Basava Jayamruthyunjaya Swamiji