Sunday, August 9, 2026

BDA Apartments

Home Front Page ನಮಗೂ ಅಧಿಕಾರ ಸಿಗಬೇಕು: ದೆಹಲಿಗೆ ಹೋಗಿ ಬರ್ತೇವೆ- ಶಾಸಕ ಬೇಳೂರು ಗೋಪಾಲಕೃಷ್ಣ

ನಮಗೂ ಅಧಿಕಾರ ಸಿಗಬೇಕು: ದೆಹಲಿಗೆ ಹೋಗಿ ಬರ್ತೇವೆ- ಶಾಸಕ ಬೇಳೂರು ಗೋಪಾಲಕೃಷ್ಣ

ಬೆಂಗಳೂರು,ಮಾರ್ಚ್,24,2026 (www.justkannada.in):  ಸಂಪುಟ ಪುನಾರಚನೆ ವಿಚಾರ ಸಂಬಂಧ ಏಪ್ರಿಲ್ 11 ರಂದು ಹಿರಿಯ ಶಾಸಕರು ದೆಹಲಿಗೆ ಹೋಗಿ ವರಿಷ್ಠರನ್ನ ಭೇಟಿ ಮಾಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಏಪ್ರಿಲ್ 11 ರಂದು ಹಿರಿಯ ಶಾಸಕರು ದೆಹಲಿಗೆ ಹೋಗುತ್ತೇವೆ. ಬೈ ಎಲೆಕ್ಷನ್ ಇರುವುದರಿಂದ ದೆಹಲಿ ಪ್ರವಾಸ ಮುಂದೂಡಿದ್ದೇವೆ. ಹಿರಿಯ ಶಾಸಕರೆಲ್ಲರೂ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡುತ್ತೇವೆ ಮೊದಲ ಬಾರಿ ಗೆದ್ದ ಶಾಸಕರು ದೆಹಲಿಗೆ ಹೋಗಿ ಬಂದಿದ್ದಾರೆ.  ಹಿರಿಯ ಶಾಸಕರು ಹೈಕಮಾಂಡ್ ಭೇಟಿ ಮಾಡಿ ಬರುತ್ತೇವೆ ಎಂದರು.

ನಮಗೂ ಅಧಿಕಾರ ಸಿಗಬೇಕು. ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದಾಗಲೂ ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ರನ್ನೂ ಭೇಟಿ ಮಾಡುತ್ತೇವೆ. ನಾಯಕತ್ವ ಬದಲಾವಣೆ ವಿಚಾರ ನಮಗೆ ಸಂಬಂಧಿಸಿದಲ್ಲ ಎಂದು  ಬೇಳೂರು ಗೋಪಾಲಕೃಷ್ಣ ತಿಳಿಸಿದರು.

Key words:  April 11, Delhi, MLA, Belur Gopalakrishna