Sunday, August 23, 2026

BDA Apartments

Home Front Page ಶಾಸಕ ‘ಭೈರತಿ ಬಸವರಾಜ್ ಗೆ ನ್ಯಾಯಾಂಗ ಬಂಧನ.

ಶಾಸಕ ‘ಭೈರತಿ ಬಸವರಾಜ್ ಗೆ ನ್ಯಾಯಾಂಗ ಬಂಧನ.

ಬೆಂಗಳೂರು,ಫೆಬ್ರವರಿ,21,2026 (www.justkannada.in):  ರೌಡಿ ಶೀಟರ್ ಬಿಕ್ಲು ಶಿವ’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್. ಪುರಂ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ಭೈರತಿ ಬಸವರಾಜು ಅವರಿಗೆ ಅವರಿಗೆ ಫೆಬ್ರವರಿ 26 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಭೈರತಿ ಬಸವರಾಜು ಅವರನ್ನು ಪೊಲೀಸರು ಇಂದು ಬಿಗಿ ಭದ್ರತೆಯಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಜಾಮೀನು ಆರ್ಜಿ ವಜಾಗೊಂಡ ಬಳಿಕ ಭೈರತಿ ಬಸವರಾಜು ಬಂಧನ ಭೀತಿ ಎದುರಿಸಿದ್ದರು. ನಂತರ ಪೊಲೀಸರು ಭೈರತಿ ಬಸವರಾಜು ಅವರನ್ನ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದರು.

Key words: Judicial custody, MLA, Bhairathi Basavaraj