ವಿಶ್ವಕರ್ಮ ಸಮಾಜಕ್ಕಾಗಿ ಶ್ರಮಿಸಿದ್ದ ಪಿ. ಸಿದ್ದಚಾರ್ ನಿಧನ: ಕೆ. ಪಿ. ನಂಜುಂಡಿ ಸಂತಾಪ

ಮೈಸೂರು,ಫೆಬ್ರವರಿ,19,2026 (www.justkannada.in): ವಿಶ್ವಕರ್ಮ ಸಮಾಜದ ಸಂಘಟನೆ, ಉಳುವಿಗಾಗಿ  ಶ್ರಮಿಸಿದ್ದ ಮೈಸೂರು ಜಿಲ್ಲೆಯ ಜೆಪಿ ನಗರದ ನಿವಾಸಿ ಪಿ. ಸಿದ್ದಚಾರ್(75) ನಿಧನರಾಗಿದ್ದು ಕಾಂಗ್ರೆಸ್ ಮುಖಂಡ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ. ಪಿ. ನಂಜುಂಡಿ ಸಂತಾಪ ಸೂಚಿಸಿದ್ದಾರೆ.

ಮೃತ ಸಿದ್ಧಚಾರ್ ಅವರು ಇಬ್ಬರು ಗಂಡು ಮಕ್ಕಳು  ಇಬ್ಬರು ಹೆಣ್ಣುಮಕ್ಕಳು, ಪತ್ನಿ ಹಾಗೂ ಮೊಮ್ಮೊಕ್ಕಳನ್ನು ಅಗಲಿದ್ದಾರೆ.  ಕೆ. ಪಿ. ನಂಜುಂಡಿ ವಿಶ್ವಕರ್ಮ  ಅವರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ನಗರಧ್ಯಕ್ಷರಾಗಿ ಇವರು ಕಳೆದ 25 ವರ್ಷ ಸಕ್ರಿಯ ಸಂಘಟನೆ ಮತ್ತು ಎಲ್ಲಾ ಹೋರಾಟಗಳಲ್ಲಿ ಭಾಗಿಯಾಗಿದ್ದರು.

ಸಿದ್ಧಚಾರ್ ನಿಧನಕ್ಕೆ ಸಂತಾಪ ಸೂಚಿಸಿರುವ ಕೆ.ಪಿ ನಂಜುಂಡಿ ಅವರು,  25 ವರ್ಷಗಳ ಹಿಂದೆ ನನ್ನ ಜೊತೆ ಮೈಸೂರು ಜಿಲ್ಲೆಯಲ್ಲಿ ವಿಶ್ವಕರ್ಮ ಮಹಾ ಸಮ್ಮೇಳನದ ಮೂಲಕ ಸಂಘಟನೆಗೆ ಧುಮುಕಿ ನಂತರ ಮಹಾಸಭಾದ ಮೂಲಕ ನೂರಾರು ಕಾರ್ಯಕ್ರಮಗಳನ್ನ ಮಾಡಿದ್ದರು. ಈ ಮೂಲಕ ವಿಶ್ವಕರ್ಮ ಸಮಾಜಕ್ಕಾಗಿ ದುಡಿದ  ಮೇರು ವ್ಯಕ್ತಿ ಸಿದ್ದಾಚಾರ್  ಅವರು.  ಅವರ ನಿಧನ ತೀವ್ರ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

Key words:  Vishwakarma society, P. Siddachar, passed away, K. P Nanjundi, Condolences