Wednesday, August 12, 2026

BDA Apartments

Home Front Page ದ್ವೇಷ ಭಾಷಣ ತಡೆ ಕಾಯ್ದೆ: ರಾಜ್ಯಪಾಲರಿಗೆ ಶಾಸಕ ಯತ್ನಾಳ್ ಪತ್ರ

ದ್ವೇಷ ಭಾಷಣ ತಡೆ ಕಾಯ್ದೆ: ರಾಜ್ಯಪಾಲರಿಗೆ ಶಾಸಕ ಯತ್ನಾಳ್ ಪತ್ರ

ಬೆಂಗಳೂರು,ಡಿಸೆಂಬರ್,22,2025 (www.justkannada.in) : ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿರುವ ದ್ವೇಷ ಭಾಷಣ ತಡೆ ಕಾಯ್ದೆ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರ ಅಂಗೀಕರಿಸಿರುವ ದ್ವೇಷ ಭಾಷಣ ತಡೆ ಕಾಯ್ದೆಗೆ ಸಹಿ ಹಾಕದಂತೆ ಮನವಿ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದಿದ್ದಾರೆ.

ಈ ಮಸೂದೆ ರಾಜಕೀಯ ವಿರೋಧಿಗಳನ್ನು ಹಣಿಯುವ ರಾಜಕೀಯ ಅಸ್ತ್ರವಾಗಿದೆ. ಸಂವಿಧಾನದ ವಾಕ್ ಸ್ವಾತಂತ್ರದ ಹಕ್ಕು ಉಲ್ಲಂಘಿಸುತ್ತದೆ.  ಹೀಗಾಗಿ ಕಾಯ್ದೆಗೆ ಸಹಿ ಹಾಕದಂತೆ ಶಾಸಕ ಯತ್ನಾಳ್ ಮನವಿ ಮಾಡಿದ್ದಾರೆ.

Key words: Hate Speech Prevention Act,  MLA, Yatnal, letter, Governor