ಕಾಲ್ತುಳಿತ ಕೇಸ್: KSCA ಅಧಿಕಾರಿಗಳ ವಿರುದ್ದ ಬಲವಂತದ ಕ್ರಮ ಬೇಡ- ಹೈಕೋರ್ಟ್

ಬೆಂಗಳೂರು,ಜೂನ್,6,2025 (www.justkannada.in): ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಕೆಎಸ್ ಸಿಎ ಮೂವರು ಅಧಿಕಾರಿಗಳಿಗೆ ಹೈಕೋರ್ಟ್ ರಿಲೀಫ್ ನೀಡಿದೆ.

ತಮ್ಮ ವಿರುದ್ದ ದಾಖಲಾಗಿರುವ ಎಫ್ ಐಆರ್ ರದ್ದು ಕೋರಿ ಕೆಎಸ್ ಸಿಎ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠವು, KSCA ಅಧಿಕಾರಿಗಳ ವಿರುದ್ದ ಬಲವಂತದ ಕ್ರಮ ಬೇಡ  ಅರ್ಜಿದಾರರ ವಿರುದ್ದ ಬಲವಂತದ ಕ್ರಮ ಬೇಡ ಎಂದು ಮಧ್ಯಮತರ ಆದೇಶ ಹೊರಡಿಸಿದೆ.

ಹಾಗೆಯೇ ಅರ್ಜಿದಾರರು ವಿಚಾರಣೆಗೆ ಸಹಕರಿಸಬೇಕು. ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ಹೈಕೋರ್ಟ್  ಷರತ್ತು  ವಿಧಿಸಿದೆ. ಈ ಮೂಲಕ  ಕೆಎಸ್ ಸಿಎ ಆಡಳಿತ  ಮಂಡಳಿ ಅಧ್ಯಕ್ಷ ರಘುರಾಂ ಭಟ್ ಕಾರ್ಯದರ್ಶಿ  ಎ.ಶಂಕರ್, ಖಜಾಂಚಿ ಇಎಸ್ ಜೈರಾಂಗೆ  ರಿಲೀಫ್ ಸಿಕ್ಕಿದೆ.vtu

Key words:  No coercive, action, against, KSCA, High Court