Thursday, August 20, 2026

BDA Apartments

Home Front Page ಅನರ್ಹರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಬಂಪರ್: 8 ನಿಗಮ ಮಂಡಳಿಗಳಿಗೆ ಅಧ್ಯಕ್ಷ ,ಉಪಾಧ್ಯರನ್ನ ನೇಮಿಸಿ...

ಅನರ್ಹರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಬಂಪರ್: 8 ನಿಗಮ ಮಂಡಳಿಗಳಿಗೆ ಅಧ್ಯಕ್ಷ ,ಉಪಾಧ್ಯರನ್ನ ನೇಮಿಸಿ ಸರ್ಕಾರ ಆದೇಶ…

ಬೆಂಗಳೂರು,ಅ,9,2019(www.justkannada.in): ರಾಜ್ಯದಲ್ಲಿ 17 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ, ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೇ ಈ ಹಿಂದಿನ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಬಂಡಾಯವೇಳುವ ಸಾಧ್ಯತೆ ಇದ್ದು ಹೀಗಾಗಿ ಇವರನ್ನ ಸಮಾಧಾನಪಡಿಸುವ ಯತ್ನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಕೈ ಹಾಕಿದ್ದಾರೆ.

ಅನರ್ಹ ಶಾಸಕರ ಹಿತ ಕಾಯಲು ಮುಂದಾಗಿರುವ ಸಿಎಂ ಬಿಎಸ್ ಯಡಿಯೂರಪ್ಪ, ಬಂಡಾಯವೇಳುವ ತಮ್ಮ ಪಕ್ಷದ ಪರಾಜಿತ ಅಭ್ಯರ್ಥಿಗಳಿಗೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನ ನೀಡಿದ್ದಾರೆ. 8 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶರತ್ ಬಚ್ಚೇಗೌಡಗೆ  ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಸ್ಥಾನ, ನಂದೀಶ್ ರೆಡ್ಡಿಗೆ ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ, ಅಶೋಕ ಪೂಜಾರಿ ಅವರನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.  ಜತೆಗೆ ಮಾಜಿ ಶಾಸಕ ಭರಮೇಗೌಡ ಕಾಗೆ ಅವರನ್ನು  ಕಾಡಾ(ಮಲಪ್ರಭಾ-ಘಟಪ್ರಭಾ ಯೋಜನೆ )ಅಧ್ಯಕ್ಷರನ್ನಾಗಿ  ಯು.ಬಿ.ಬಣಕಾರ ಅವರನ್ನು ಕರ್ನಾಟಕ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗರಮದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ಬಸನಗೌಡ ತುರುವಿಹಾಳಗೆ ಕಾಡಾ( ತುಂಗಭದ್ರಯೋಜನೆ) ಮತ್ತು ವಿ.ಎಸ್ ಪಾಟೀಲ್ ಗೆ  ಎನ್ ಡಬ್ಲ್ಯು ಕೆಆರ್ ಟಿಸಿ ಅಧ್ಯಕ್ಷರನ್ನಾಗಿ ನೇಮಿಸಿದೆ ಹಾಗೆಯೇ ಹೆಚ್.ಆರ್ ಗವಿಯಪ್ಪಗೆ  ಸಣ್ಣ ಕೈಗಾರಿಕೆ  ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನವನ್ನ ನೀಡಿ ಆದೇಶ ಹೊರಡಿಸಲಾಗಿದೆ. ಬಸನಗೌಡ ತುರವಿಹಾಳ ಅವರನ್ನು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮುನಿರಾಬಾದ್ ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

Key words: Bumper -loser candidates- Government – appoint -8 corporation boards –chairman- vice president