Friday, September 11, 2026

BDA Apartments

Home Front Page 69 ಸಾಧಕರಿಗೆ 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

69 ಸಾಧಕರಿಗೆ 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಮೈಸೂರು, ಅಕ್ಟೋಬರ್,31,2024 (www.justkannada.in): ಕಲೆ, ಸಾಹಿತ್ಯ, ರಂಗಭೂಮಿ, ನೃತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 69 ಸಾಧಕರನ್ನು 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸೇವೆಗೆ ಕೆ.ತೇಜೋವತಿ, ಸಮಾಜ ಸೇವೆಗೆ ದೇವಗಳ್ಳಿ ರಂಗಭೂಮಿಯಲ್ಲಿ ಸೋಮಶೇಖರ್, ಪ್ರಸಾದ್ ಕುಂದೂರು, ಸಾಹಿತ್ಯದಲ್ಲಿ ಸಿದ್ದಸ್ವಾಮಿ ಸೇರಿದಂತೆ 69 ಮಂದಿ 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಹೆಸರು ಈ ಕೆಳಕಂಡಂತಿದೆ.

ಕೆ.ತೇಜೋವತಿ, ಕಾಳಪ್ಪ, ಸಿ.ಜೆ.ಲೋಕೇಶ್, ಎನ್.ಜಿ  ಗಿರೀಶ್ ಡೈರಿ ವೆಂಕಟೇಶ (ಕನ್ನಡಪರ ಹೋರಾಟ), ಎನ್. ಭಾಸ್ಕರ, ಹರೀಶ್, ಜಯಪ್ರಕಾಶ್‌ ರಾವ್, ಎಸ್.ವಿ.ರಾಘವೇಂದ್ರ, ಟಿ.ತ್ಯಾಗರಾಜು, ಎಸ್.ರಂಗನಾಥ್, ಮಾಲಿನಿ ಫಾಲಾಕ್ಷ, ಪಿ.ಸಿ.ರಾಜೇಶ್ ಗೌಡ, ಎಂ.ಎಸ್. ಸುಷ್ಮಾ, ಎಂ.ಎಂ.ನಿಖಿಲೇಶ್, ದೇವಗಳ್ಳಿ ಸೋಮಶೇಖರ್, ಟಿ.ಸುರೇಶ್, ಎಚ್. ಆರ್.ನಾಗೇಂದ್ರರಾವ್(ಸಮಾಜ ಸೇವೆ).

ಎಂ.ಎಲ್. ರಾಜೇಂದ್ರ ಪ್ರಸಾದ್, ಆಕಾಶ್ ಆರಾಧ್ಯ, ಬಿ.ಪಿ. ಮೂರ್ತಿ, ಎಂ.ಸಿದ್ದರಾಜು, ಬಿ.ಆರ್. ಪರಂಜ್ಯೋತಿ, ಫಾಲ್ಕಿಯಾ ಖಾನ್, ಆರ್. ಗೋವಿಂದರಾಜು (ಯೋಗ, ಕ್ರೀಡೆ), ಪಿ.ಎನ್.ಹೇಮಚಂದ್ರ, ಎನ್.ಸುರೇಶ್, ಜಿ.ರವಿಶಂಕರ್, ವಿ.ಜಿ ಸಿದ್ದರಾಜು (ಶಿಕ್ಷಣ).

ಚಿಕ್ಕತಾಯಮ್ಮ, ಎಂ.ಮಹಾಲಿಂಗ, ಎನ್.ಮಲ್ಲೇಶಯ್ಯ, ತಿರುಮಲೇಗೌಡ (ಜಾನಪದ), ಕೆ.ಶಶಿಕುಮಾರ್, ಎಲ್. ಸತೀಶ್, ಜೆ.ನವೀನ್ ಕುಮಾರ್, ಎಂ. ಸುಬ್ರಹ್ಮಣ್ಯ. ಹನಗೋಡು ನಟರಾಜ, ಸಿ.ಕೆ ಮಹೇಂದ್ರ, ಎಂ.ಟಿ.ಮಹದೇವ, ರವಿ ಗವಿಮಠ(ಪತ್ರಿಕೋದ್ಯಮ).

ಕುಮಾರ್ ಅರಸೇಗೌಡ, ವಿ.ಆಲ್ಬರ್ಟ್, ಪ್ರಸಾದ್ ಕುಂದೂರು, ತುಷಾರ್ ಭಾರದ್ವಾಜ್, ಸಂಜಯ್ ಶಾಂತಾರಾಮ್ (ರಂಗಭೂಮಿ, ನೃತ್ಯ, ಅಭಿನಯ), ಕೆ.ಕೆಂಪಣ್ಣ, ಎಸ್.ಪುಟ್ಟಪ್ಪ ಮುಡಿಗುಂದ, ಸಿದ್ದಸ್ವಾಮಿ, ಮ.ನ ಲತಾ ಮೋಹನ್, ಪುಷ್ಪಾ ಅಯ್ಯಂಗಾರ್ (ಸಾಹಿತ್ಯ)  ಎಚ್‌.ಎಂ.ಮಹದೇವ, ಎಂ.ಎಸ್.ಜಾನಕಿರಾಮ್, ಆರ್. ಕೆ.ಪದ್ಮನಾಭ, (ಸಂಗೀತ). ಪಿ.ಜವರನಾಯಕ(ಸಂಗೀತ).

ಡಾ.ರಘುನಾಥ ಡಾ.ಎಸ್. ಆಲದಕಟ್ಟೆ, ರಂಗನಾಥಯ್ಯ, ಡಾ.ಶೋಭಾ, ಎ. ಉಷಾ ಹೆಗಡೆ ಡಾ.ಉಷಾ (ವೈದ್ಯಕೀಯ), ಲಾಗೈಡ್ ವೆಂಕಟೇಶ್ (ಕಾನೂನು), ಗಜಾನನ ಭಟ್, ಎಚ್. ಎಸ್.ನಂಜುಂಡಸ್ವಾಮಿ (ಸೇನೆ), ತಗಡೂರು ನಾಗರಾಜು (ಸಂಕೀರ್ಣ), ಪಿ.ಎ.ರಾಧಾ, ಎಚ್.ಎನ್.ಶ್ರೀಕಾಂತ ಕಶ್ಯಪ (ಪರಿಸರ), ಆರ್.ಚಕ್ರಪಾಣಿ, ಪ್ರಶಾಂತ್ ಆರ್ಯ (ಧಾರ್ಮಿಕ), ಅಮಿನಾ ಬೇಗಂ ಕಾಲೇಖಾನ್ (ಚಿತ್ರಕಲೆ), ಪಾರ್ವತಿ ರಾಮಕೃಷ್ಣ(ವಾಸ್ತುಶಿಲ್ಪ).

ಲಾ ಗೈಡ್ ವೆಂಕಟೇಶ್

Key words: mysore,  District Rajyotsava Award , 69 achievers