Saturday, September 12, 2026

BDA Apartments

ಯದುವೀರ್ ಒಡೆಯರ್ “ ಬನ್ನಿ ಪೂಜೆ” ಪೂರ್ಣ: ಜಂಬೂ ಸವಾರಿಗೆ ಕ್ಷಣಗಣನೆ BDA JK_Adv BDA Adv
Home DASARA2024 ಯದುವೀರ್ ಒಡೆಯರ್ “ ಬನ್ನಿ ಪೂಜೆ” ಪೂರ್ಣ:  ಜಂಬೂ ಸವಾರಿಗೆ ಕ್ಷಣಗಣನೆ..

ಯದುವೀರ್ ಒಡೆಯರ್ “ ಬನ್ನಿ ಪೂಜೆ” ಪೂರ್ಣ:  ಜಂಬೂ ಸವಾರಿಗೆ ಕ್ಷಣಗಣನೆ..

Mysore dasara-2024 live telecast from Mysore palace


ಮೈಸೂರು, ಅ.12,2024: (www.justkannada.in news) ನಾಡ ಹಬ್ಬ ಮೈಸೂರು ದಸರಾ 2024ರ ಮಹೋತ್ಸವದ ವಿಜಯ ದಶಮಿಯ ಜಂಬೂ ಸವಾರಿಗೆ ಅಂಬಾವಿಲಾಸ ಅರಮನೆ ಸಜ್ಜಾಗಿದ್ದು, ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಇಂದು ಬೆಳಗ್ಗೆ 8ಗಂಟೆಗೆ ಚಾಮುಂಡಿಬೆಟ್ಟದಿಂದ ಉತ್ಸವ ಮೂರ್ತಿ(ಚಾಮುಂಡೇಶ್ವರಿ ಮೂರ್ತಿ ) ಹೊರಬಂದು ಮೆರವಣಿಗೆ ಮೂಲಕ ಅಂಬಾವಿಲಾಸ ಅರಮನೆ ತಲುಪಿದೆ. ಬೆಳಗ್ಗೆ 10:15ಕ್ಕೆ ಅರಮನೆ ಆವರಣದಲ್ಲಿ ನಡೆಯುವ ಉತ್ತರ ಪೂಜೆಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸಿದವು.

<>
ಬಳಿಕ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಬೆಳಗ್ಗೆ 10:45 ರಿಂದ 11 ಗಂಟೆಯ ಒಳಗೆ ಜೆಟ್ಟಿಗಳ ಕಾಳಗ ನಡೆಯಿತು.

ನಂತರ ಬೆ 11:20 ರಿಂದ 11:45ರ ವರಗೆ ಅರಮನೆ ಅಂಗಳದ ಭುವನೇಶ್ವರಿ ದೇವಸ್ಥಾನಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಬನ್ನಿ ಪೂಜೆ ಸಲ್ಲಿಸಿದರು. ಬನ್ನಿ ಪೂಜೆಯ ಬಳಿಕ ಯದುವೀರ್ ರವರು ಸ್ವಸ್ಥಾನಕ್ಕೆ ಆಗಮಿಸಿ ಕಂಕಣ ವಿಸರ್ಜನೆ ಮಾಡುವರು.

ಮದ್ಯಾಹ್ನ 1:41 ರಿಂದ 2:10ರ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ನಂದಿಧ್ವಜ ಪೂಜೆ ನಡೆಯಲಿದೆ. ನಂದಿ ಧ್ವಜ ಪೂಜೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೆರವೇರಿಸಲಿದ್ದಾರೆ.

ಯದುವೀರ್ ಒಡೆಯರ್ “ ಬನ್ನಿ ಪೂಜೆ” ಪೂರ್ಣ yadhuveer yadhuveer 1

ನಂದಿಧ್ವಜ ಪೂಜೆ ಬಳಿಕ ವಿಜಯದಶಮಿ ಮೆರವಣಿಗೆ( ಜಂಬೂ ಸವಾರಿ )ಯು ಅರಮನೆಯ ಒಳಂಗಣದಿಂದ ಪ್ರಾರಂಭಗೊಂಡು ಬನ್ನಿ ಮಂಟಪದ ವರಗೆ ಸಾಗಲಿದೆ. ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆ ಹಾಗೂ ವಿವಿಧ ಇಲಾಖೆಗಳಿಂದ ತಯಾರಾದ 51 ಸ್ಥಬ್ದ ಚಿತ್ರಗಳು ಜಂಬೂ ಸವಾರಿ ತೆರಳುವ ಮಾರ್ಗದಲ್ಲಿ ಸಂಚಾರ ನಡೆಸಳಿವೆ.

ಸ್ವರ್ಣದಂಬಾರಿಯಲ್ಲಿ ವಿರಾಜಮಾನಳಾದ ನಾಡದೇವಿ ಶ್ರೀ ಚಾಮುಂಡೇಶ್ವರಿಗೆ ಸಂಜೆ 4ಗಂಟೆಯಿಂದ 4:30 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಂಸದ ಹಾಗೂ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ರವರಿಂದ ಪುಷ್ಪರ್ಚನೆ ಮಾಡಲಿದ್ದಾರೆ.

ಜಂಬೂ ಸವಾರಿಗೆ ಕ್ಷಣಗಣನೆ dasara-live dasara live

ಬಳಿಕ ಸಂಜೆ ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ  ಸಂಜೆ 7 ಗಂಟೆಗೆ ಪ್ರಾರಂಭವಾಗುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ಥಾವರ ಚಂದ್ ಗೆಹಲೊಟ್ ಅವರು ಪಂಜಿನ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು.

key words: Mysore, dasara-2024, live telecast, from Mysore palace