Sunday, August 23, 2026

BDA Apartments

Home Front Page ಸರ್ಕಾರಕ್ಕೆ ಸಮಾಜ ವಿಭಜಿಸುವ ಉದ್ದೇಶ: ಕಾನೂನು ಪಾಲನೆ ಮಾಡುವಲ್ಲಿ ವಿಫಲ-ಶಾಸಕ ಅಶ್ವಥ್ ನಾರಾಯಣ್.

ಸರ್ಕಾರಕ್ಕೆ ಸಮಾಜ ವಿಭಜಿಸುವ ಉದ್ದೇಶ: ಕಾನೂನು ಪಾಲನೆ ಮಾಡುವಲ್ಲಿ ವಿಫಲ-ಶಾಸಕ ಅಶ್ವಥ್ ನಾರಾಯಣ್.

ಕೋಲಾರ.,ಮೇ,27,2024 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಮಾಜ ವಿಭಜಿಸುವ ಉದ್ದೇಶವಿದೆ.  ಕಾನೂನು ಪಾಲನೆ ಮಾಡುವಲ್ಲಿ ವಿಫಲವಾಗಿದೆ ಎಂದು ಶಾಸಕ ಅಶ್ವಥ್ ನಾರಾಯಣ್ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅಶ್ವಥ್ ನಾರಾಯಣ್, ಪ್ರಜ್ವಲ್ ರಾಜ್ಯದಿಂದ ಹೊರಹೋಗಲು ಬಿಟ್ಟಿದ್ಯಾರು..?  ಪೆನ್ ಡ್ರೈವ್ ಹಂಚಿರುವ ಮಹಾನಾಯಕನನ್ನೇ ಕೇಳಿ . ಪ್ರಜ್ವಲ್ ವಿದೇಶಕ್ಕೆ ಕಳಿಸಿದ್ದು ಯಾರು  ಸಿಎಂಗೆ ಹೇಗೆ ನಡೆದುಕೊಳ್ಣಬೇಕು ಎಂಬು ಗೊತ್ತಿಲ್ಲ  ಮಹಿಳೆಯರ ಮರ್ಯಾದೆ ಬೀದಿಗೆ ತಂದಿದ್ದು ಸರ್ಕಾರ ಎಂದು ಕಿಡಿಕಾರಿದರು.

ಕಾನೂನು ಪಾಲನೆ ಮಾಡುವಲ್ಲಿ ಸರ್ಕಾರ ವಿಫಲ ಕಾನೂ ಸುವಯವಸ್ಥೇ ಹಾಳು ಮಾಡಿದ್ದು ಸರ್ಕಾರ  ಹಾಸನ ಜಿಲ್ಲಾಡಳಿತ ಬಳಿಸಿ ಈಕೆಲಸ. ಸರ್ಕಾರಕ್ಕೆ ಸಮಾಜ ವಿಭಜಿಸುವ ಉದ್ದೇಶವಿದೆ.  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ಕೊಲೆ ಕ್ರಿಮಿನಲ್ ಪ್ರಕರಣ ಹೆಚ್ಚಾಗಿದೆ. ಇದರ ಬಗ್ಗೆ ಸಿಎಂ ಗೃಹ ಸಚವರು ಮಾತನಾಡುಲ್ಲ ಭ್ರಷ್ಟಾಚಾರ ವರ್ಗಾವಣೆ ದಂಧೆಯಾಗಿದೆ. ನಾವು ಬೆಂಗಳೂರಿನಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದರು.

Key words: Govt, intention , divide, society, Aswath Narayan.