Saturday, August 15, 2026

BDA Apartments

Home Front Page ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದ ಶಾಸಕ ಸುರೇಶ್ ಕುಮಾರ್.

ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದ ಶಾಸಕ ಸುರೇಶ್ ಕುಮಾರ್.

ಬೆಂಗಳೂರು,ಜೂನ್,12,2023(www.justkannada.in):  ಸಕಾಲ ಯೋಜನೆಗೆ ಮಂತ್ರಿಗಳನ್ನು ನಿಯೋಜಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಶಾಸಕ ಸುರೇಶ್ ಕುಮಾರ್ ಪತ್ರವನ್ನು ಬರೆದಿದ್ದು, ಇಂದು ನಾಳೆ ಇನ್ನಿಲ್ಲ, ಹೇಳಿದ ಸಮಯ ತಪ್ಪೊಲ್ಲ ಎಂಬ ಆಶಯದಂತೆ ಸಕಾಲ ಯೋಜನೆ ಅನುಷ್ಠಾನಗೊಂಡಿದೆ. ಸಕಾಲ ಯೋಜನೆಗೆ ಮಂತ್ರಿಗಳನ್ನು ನಿಯೋಜಿಸಿ ಎಂದು ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಬಳಿಯೇ ಇರುವ ಸಕಾಲ ಇಲಾಖೆ ಜವಾಬ್ದಾರಿಯನ್ನು ಸಚಿವರೊಬ್ಬರಿಗೆ ವಹಿಸುವಂತೆ ಪತ್ರ ಬರೆದಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸುರೇಶ್ ಕುಮಾರ್ ಸಕಾಲ ಸಚಿವರಾಗಿದ್ದರು.

Key words: MLA- Suresh Kumar -wrote – letter – CM Siddaramaiah.