Thursday, September 17, 2026

BDA Apartments

ವ್ಯಾಪಕ ಮಳೆಗೆ ಒಂದು ತಿಂಗಳಲ್ಲಿ 12 ಮಂದಿ ಸಾವು: ಮನೆ ಹಾನಿಗೆ 10 ಸಾವಿರ ರೂ. ಪರಿಹಾ...
Home Front Page ವ್ಯಾಪಕ ಮಳೆಗೆ ಒಂದು ತಿಂಗಳಲ್ಲಿ 12 ಮಂದಿ ಸಾವು: ಮನೆ ಹಾನಿಗೆ 10 ಸಾವಿರ ರೂ....

ವ್ಯಾಪಕ ಮಳೆಗೆ ಒಂದು ತಿಂಗಳಲ್ಲಿ 12 ಮಂದಿ ಸಾವು: ಮನೆ ಹಾನಿಗೆ 10 ಸಾವಿರ ರೂ. ಪರಿಹಾರ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಜುಲೈ,8,2022(www.justkannada.in):  ರಾಜ್ಯದಲ್ಲಿ ಮಳೆರಾಯನ  ಆರ್ಭಟ ಜೋರಾಗಿದ್ದು, ಮಳೆಯಿಂದಾಗಿ ಕಳೆದ ಒಂದು ತಿಂಗಳಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಎಂದು  ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿ ವ್ಯಾಪಕ ಮಳೆ ಹಿನ್ನೆಲೆ ಇಂದು ಜಿಲ್ಲಾಧಿಕಾರಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ ಚರ್ಚಿಸಿದರು.  ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಕಳೆದ  ಮೂರ್ನಾಲ್ಕು ದಿನಗಳಿಂದ ವಾಡಿಕೆಯಂತೆ ಹೆಚ್ಚು ಮಳೆಯಾಗಿದೆ. ಮಳೆಯಿಂದಾಗಿ 65 ಜಾನುವಾರುಗಳು ಸಾವನ್ನಪ್ಪಿವೆ.  13 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಅದರಲ್ಲೂ 13 ತಾಲ್ಲೂಕುಗಳಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದೆ ಎಂದರು.

ಇನ್ನೂ 3 ದಿನ ಮಳೆಯಾಗುವ ಮುನ್ಸೂಚನೆಯನ್ನ ಹವಮಾನ ಇಲಾಖೆ ನೀಡಿದೆ.  ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.  ನದಿ ತೀರದ ಜನರನ್ನ ಸ್ಥಳಾಂತರ ಮಾಡಲಾಗಿದೆ. ಇನ್ನು ಮಳೆಯಿಂದ ಹಾನಿಯಾದ ಮನೆಗಳಿಗೆ ರಾಜ್ಯ ಸರ್ಕಾರದಿಂದ 10 ಸಾವಿರ ನೆರವು ನೀಡಲಾಗುವುದು. ತಂತ್ರಜ್ಞಾನ ಬಳಸಿ ಕಡಲಕೊರೆತ ತಡೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಮಳೆಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್ ಬಳಕೆ ಮಾಡುತ್ತೇವೆ  ಎಂದರು.

Key words: 12 people-died – one month – rain-CM -Basavaraja Bommai.