Tuesday, August 25, 2026

BDA Apartments

Home Crime ತನ್ನ ಅಜ್ಜಿ, ತಾಯಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ತನ್ನ ಅಜ್ಜಿ, ತಾಯಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ಬೆಂಗಳೂರು,ಜುಲೈ,11,2026 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ತ್ರಿವಳಿ ಮರ್ಡರ್ ನಡೆದಿದ್ದು ಯುವಕನೊಬ್ಬ ತನ್ನ ಅಜ್ಜಿ, ತಾಯಿ ಮತ್ತು ಮಾವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಘಳೂರೀನ ಕೊಟ್ಟಿಗೆ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ್ ಕೊಲೆ ಮಾಡಿದ ಆರೋಪಿ. ಅಜ್ಜಿ ನಂಜಮ್ಮ,  ತಾಯಿ ಮಂಗಳಮ್ಮ, ಮಾವ ಸತೀಶ್ ರನ್ನು ಕೊಲೆಯಾದವರು.

ಆರೋಪಿ ಪ್ರಶಾಂತ್ ಮಚ್ಚಿನಿಂದ ಮೂವರನ್ನ ಹಲ್ಲೆ ನಡೆಸಿ ಭೀಕರವಾಗಿ ಕೊಂದು ನಂತರ ಮನೆಯ ರೂಮ್ ಗೆ ತೆರಳಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಈ ಕುರಿತು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  young man, killed, grandmother, mother, suicide