ಕೃಷ್ಣ ನದಿಗೆ ನೀರು ಬಿಟ್ಟ ಹಿನ್ನೆಲೆ:  ನಡುಗಡ್ಡೆಯಲ್ಲಿ ಸಿಲುಕಿದ 11 ಮಂದಿ…

ರಾಯಚೂರು,ಆ,17,2020(www.justkannada.in):  ರಾಜ್ಯದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಕೃಷ್ಣಾ ನದಿಗೆ ನೀರು ಬಿಡಲಾಗಿದ್ದು ಈ ವೇಳೆ 11 ಮಂದಿ ಪ್ರವಾಹಕ್ಕೆ ಸಿಲುಕಿರುವ ಘಟನೆ ನಡೆದಿದೆ.water-krishna-river-11-member-flood

ರಾಯಚೂರು ಜಿಲ್ಲೆ ಲಿಂಗಸೂಗೂರಿನ ಮ್ಯಾದರಗುಡ್ಡದಲ್ಲಿ ಮಹಿಳೆ ಮಕ್ಕಳು ಸೇರಿ 11 ಮಂದಿ ಸಿಲುಕಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ನದಿಗಳು ತುಂಬಿ ಹರಿಯುತ್ತಿದ್ದು ಈ ನಡುವೆ ಕೃಷ್ಣಾನದಿಗೆ ನೀರು ಬಿಡಲಾಗಿತ್ತು.water-krishna-river-11-member-flood

ಈ ಮಧ್ಯೆ ನಡುಗಡ್ಡೆಯಲ್ಲಿ ಸಿಲುಕಿದ್ದ 70ಕ್ಕೂ ಹೆಚ್ಚು ಕುರಿಗಳನ್ನ ವಾಪಸ್ ಕರೆತರಲು 11 ಮಂದಿ ತೆರಳಿದ್ದು ಈ ವೇಳೆ ನೀರು ಹರಿಸಲಾಗಿದೆ. ಇದರಿಂದಾಗಿ 11 ಮಂದಿಯೂ ಪ್ರವಾಹದಲ್ಲಿ ಸಿಲುಕಿದ್ದಾರೆ. ಇವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

Key words: water- Krishna River- 11 member-flood