Sunday, August 16, 2026

BDA Apartments

Home Front Page ವಕ್ಫ್ ಆಸ್ತಿ ವಿವಾದ: ರಾಜ್ಯ ಸರ್ಕಾರದ ವಿರುದ್ದ ಸುಮಲತಾ ಅಂಬರೀಶ್ ವಾಗ್ದಾಳಿ

ವಕ್ಫ್ ಆಸ್ತಿ ವಿವಾದ: ರಾಜ್ಯ ಸರ್ಕಾರದ ವಿರುದ್ದ ಸುಮಲತಾ ಅಂಬರೀಶ್ ವಾಗ್ದಾಳಿ

ಮಂಡ್ಯ,ನವೆಂಬರ್,22,2024 (www.justkannada.in): ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಇಂದು ಮಾತನಾಡಿದ ಸುಮಲತಾ ಅಂಬರೀಶ್, ರಾಜ್ಯ ಸರ್ಕಾರದಿಂದ ರೈತರಿಗೆ ಜನರಿಗೆ ಅನ್ಯಾಯವಾಗುತ್ತಿದೆ. ಭವಿಷ್ಯ ಹೇಗರಲಿದೆ ಎಂದು ಸರ್ಕಾರ ತೋರಿಸುತ್ತಿದದೆ.  ಯಾವುದೇ ಪಕ್ಷ ವ್ಯಕ್ತಿಗೋ ಸಂಬಂಧಿಸಿದಲ್ಲ. ಈ ವಿಚಾರವನ್ನ ನಿರ್ಲಕ್ಷ ಮಾಡಿದರೇ ಸಮಸ್ಯೆ ಉಲ್ಬಣವಾಗುತ್ತೆ ಎಂದು ಎಚ್ಚರಿಸಿದರು

ಸರ್ಕಾರದ ನಡವಳಿಕೆ ತಪ್ಪು. ಅದನ್ನ ಖಂಡಿಸುತ್ತೇನೆ.  ನೋಟಿಸ್  ಕಳುಹಿಸಿ ವಾಪಸ್ ತೆಗೆದುಕೊಳ್ತಾರೆ ಇದರ ಹಿಂದಿನ  ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಸರ್ಕಾರದಿಂದ ಕೊಟ್ಟು ಕಿತ್ತುಕೊಳ್ಳುವ ಕೆಲಸವಾಗುತ್ತಿದೆ. ದೇಶ ಒಡೆಯುವ ಹುನ್ನಾರ ನಡೆಯುತ್ತಿದೆ ಎಂದು ಸುಮಲತಾ ಅಂಬರೀಶ್ ಕಿಡಿಕಾರಿದರು.

Key words: Wakf property, dispute, Sumalata Ambarish, government