ಕೊಳ್ಳೇಗಾಲ ತಾಲೂಕಿನಲ್ಲಿ ಹಳ್ಳಿ ದಸರಾ-ಮಹಿಷ ಹಬ್ಬ ಆಚರಣೆ

ಚಾಮರಾಜನಗರ,ಅಕ್ಟೋಬರ್,26,2020(www.justkannada.in) : ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಳೇ ಅಣಗಳ್ಳಿ ಗ್ರಾಮದಲ್ಲಿ ಹಳ್ಳಿ ದಸರಾ- ಮಹಿಷ ಹಬ್ಬವನ್ನು ಮಹಿಷಾಸುರ,ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ಆಚರಿಸಲಾಯಿತು.jk-logo-justkannada-logo

ಗ್ರಾಮದ ಯಜಮಾನ, ರೈತ ಮುಖಂಡ ಬಸವರಾಜು ನೇತೃತ್ವದಲ್ಲಿ ಹಳ್ಳಿ ದಸರಾ-ಮಹಿಷಾ ಹಬ್ಬವನ್ನು ಆಚರಿಸಿದರು. ಟ್ರ್ಯಾಕ್ಟರ್ ಮೂಲಕ ಮೂವರ ಭಾವಚಿತ್ರಗಳನ್ನು ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ಮಾಡಿ ಉತ್ಸವ ಆಚರಿಸಿದರು.

ಜನಪರವಾಗಿ ಆಳ್ವಿಕೆ ನಡೆಸಿ ಜನರಿಗಾಗಿ ಪ್ರಾಣ ತೆತ್ತಿದ್ದಾರೆ

ರೈತ ಮುಖಂಡ ಬಸವರಾಜು ಮಾತನಾಡಿ, ಮೈಸೂರಿನಲ್ಲಿ ದೊರೆ ಮಹಿಷ ರಾಜರಾಗಿದ್ದರು. ಆ ಕಾಲದಲ್ಲಿ ಜನಪರವಾಗಿ ಆಳ್ವಿಕೆ ನಡೆಸಿ ಜನರಿಗಾಗಿ ಪ್ರಾಣ ತೆತ್ತಿದ್ದಾರೆ. ರಾಜ್ಯಾದ್ಯಂತ ಮಹಿಷ ದಸರಾ ಆಚರಣೆಯಾಗಬೇಕಿದೆ ಎಂದರು.

ಜಾತ್ಯತೀತವಾಗಿ ರಾಜಕೀಯವಿಲ್ಲದೆ ಹಬ್ಬ ಮಾಡಲಾಗಿದೆ

ಹಿಂದಿನ ಚರಿತ್ರೆ ಇತಿಹಾಸ ಮುಂದಿನ ಪೀಳಿಗೆಗೆ ಗೊತ್ತಾಗಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಜಾತ್ಯತೀತವಾಗಿ ರಾಜಕೀಯವಿಲ್ಲದೆ ಮಾಡಲಾಗಿದೆ. ನಮ್ಮ ಮೈಸೂರು ಪ್ರಾಂತ್ಯವನ್ನಾಳಿದ ಮಹಿಷ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಜಾತ್ಯತೀತವಾಗಿ ರಾಜಕಿಯವಿಲ್ಲದೇ ಮಾಡಲಾಗಿದೆ.village-Dasara-Mahisha-festival-Kallagela-Taluk

ನಮ್ಮ ಮೈಸೂರು ಪ್ರಾಂತ್ಯವನ್ನಾಳಿದ ಮಹಿಷ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶ ಇದಾಗಿದೆ. ನಾವು ಸ್ವತಂತ್ರ ಭಾರತದಲ್ಲಿದ್ದು ಪೂಜಿಸುವುದು ಮೆರವಣಿಗೆ ಮಾಡುವುದು ಅವರವರ ಆಯ್ಕೆಯಾಗಿದೆ. ಅದನ್ನು ಸ್ವತಂತ್ರವಾಗಿ ಬಿಡಬೇಕು ಎಂದು ಹೇಳಿದರು.

key words : village-Dasara-Mahisha-festival-Kallagela-Taluk