ಉತ್ತರ ಪ್ರದೇಶ ಚುನಾವಣೆ: ಸ್ಪರ್ಧಾ ಕ್ಷೇತ್ರ ಆಯ್ಕೆಮಾಡಿಕೊಂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಬೆಂಗಳೂರು, ಜನವರಿ 16, 2022 (www.justkannada.in): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಗೋರಖಪುರದಿಂದ ಸ್ಪರ್ಧಿಸಲಿದ್ದಾರೆ.

ಅಯೋಧ್ಯೆ ಅಥವಾ ಮಥುರಾದಿಂದ ಅವರು ಸ್ಪರ್ಧಿಸಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೂಡ ಅಚ್ಚರಿಯಾಗುವ ರೀತಿಯಲ್ಲಿ ಯೋಗಿ ಅವರು ಗೋರಖಪುರ ಆಯ್ದುಕೊಂಡಿದ್ದಾರೆ.

1967ರಿಂದ ಈವರೆಗೆ ಒಮ್ಮೆಯೂ ಈ ವಿಧಾನಸಭಾ ಕ್ಷೇತ್ರದಲ್ಲಿ ಜನಸಂಘ ಅಥವಾ ಬಿಜೆಪಿ ಸೋತಿಲ್ಲ. ಹಾಲಿ ಶಾಸಕ ರಾಧಾಮೋಹನ್ ದಾಸ್‌ ಅಗರ್‌ವಾಲ್‌ ಅವರು ಯೋಗಿ ಅವರ ನಿಷ್ಠಾವಂತ. 2002ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಗೋರಖ್‌ಪುರ ಕ್ಷೇತ್ರದಿಂದ ನನ್ನನ್ನು ಕಣಕ್ಕಿಳಿಸಿದ್ದಕ್ಕಾಗಿ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಆಯ್ಕೆ ಸಮಿತಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.