Friday, August 21, 2026

BDA Apartments

Home Front Page ಕಾಂಗ್ರೆಸ್ ನವರಿಗೆ ಕರೆ ಕೊಡ್ತೇನೆ, ಆ ಹುಡುಗನನ್ನ ಸೋಲಿಸಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ನವರಿಗೆ ಕರೆ ಕೊಡ್ತೇನೆ, ಆ ಹುಡುಗನನ್ನ ಸೋಲಿಸಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ದಾವಣಗೆರೆ,ಏಪ್ರಿಲ್,6,2026 (www.justkannda.in): ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ , ಕಾಂಗ್ರೆಸ್ ಎರಡೂ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು ಈ ನಡುವೆ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವಂತೆ ಕಾಂಗ್ರೆಸ್ ನವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕರೆ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ  ಕರಿಯಪ್ಪ ಪರ ಪ್ರಚಾರ ನಡೆಸುತ್ತಾ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ  ಶಾಸಕಾರಾದರೆ ದಾವಣಗೆರೆ ಕಬ್ಜ ಮಾಡುತ್ತಾರೆ.  ಕಾಂಗ್ರೆಸ್ ಬಾಗಲಕೋಟೆಯಲ್ಲಿ ಅಹಿಂದ, ಇಲ್ಲಿ ಗೋವಿಂದ ಎಂದು ವ್ಯಂಗ್ಯವಾಡಿದರು.

ಆ ಹುಡುಗನಿಗೆ ಗೆಲ್ಲಲು ಕೊಟ್ಟರೆ ಮುಂದೆ ಸಮಸ್ಯೆ ಆಗಲಿದೆ. ಕಾಂಗ್ರೆಸ್ ನವರಿಗೆ ಕರೆ ಕೊಡುತ್ತೇನೆ ಆ ಹುಡುಗನನ್ನ ಸೋಲಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

Key words: Davanagere, By-election, Congress, Union Minister, Pralhad Joshi