Tuesday, September 1, 2026

BDA Apartments

Home Front Page ಸ್ನೇಹಮಯಿ ಕೃಷ್ಣ ಬಂಧನ ಹಿಂದೆ ಸಿಎಂ ಮತ್ತು ದೊಡ್ಡ ಕೈವಾಡವಿದೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಸ್ನೇಹಮಯಿ ಕೃಷ್ಣ ಬಂಧನ ಹಿಂದೆ ಸಿಎಂ ಮತ್ತು ದೊಡ್ಡ ಕೈವಾಡವಿದೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕಲಬುರಗಿ,ಫೆಬ್ರವರಿ,21,2026 (www.justkannada.in): ಸಿಸಿಬಿಯಿಂದ ಸ್ನೇಹಮಯಿ ಕೃಷ್ಣ ಬಂಧನದ ಹಿಂದೆ ಸಿಎಂ ದೊಡ್ಡ ಕೈವಾಡವಿದೆ  ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಟೋರಿಯಸ್ ನಟೇಶ್ ದೂರಿನ ಮೇಲೆ ಸ್ನೇಹಮಯಿ ಕೃಷ್ಣರನ್ನು ಬಂಧಿಸಿದ್ದೀರಿ ನಿಮಗೆ ನಾಚಿಕೆ ಆಗಲ್ವಾ? ಎಂದು ವಾಗ್ದಾಳಿ ನಡೆಸಿದರು.

ಮಾನ ಮರ್ಯಾದೆ ಇದ್ದರೆ ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಲಿ ಸ್ನೇಹಮಯಿ ಕೃಷ್ಣ ಕೋರ್ಟ್ ಗೆ ದಾಖಲೆ ಸಲ್ಲಿಸಲಿ ಎಂದು ಪ್ರಹ್ಲಾದ್ ಜೋಶಿ ಆಗ್ರಹಿಸಿದರು.

Key words:  Snehamayi Krishna, arrest, Union Minister,  Prahlad Joshi