Saturday, August 22, 2026

BDA Apartments

Home Front Page ಅಂಡರ್ 19 ವಿಶ್ವಕಪ್‌ ‘ಹೀರೋ’ ಮನ್ಜೋತ್ ಕಲ್ರಾ ರಣಜಿ ಕ್ರಿಕೆಟ್’ನಿಂದ ಅಮಾನತು

ಅಂಡರ್ 19 ವಿಶ್ವಕಪ್‌ ‘ಹೀರೋ’ ಮನ್ಜೋತ್ ಕಲ್ರಾ ರಣಜಿ ಕ್ರಿಕೆಟ್’ನಿಂದ ಅಮಾನತು

ಬೆಂಗಳೂರು, ಜನವರಿ 02, 2019 (www.justkannada.in): ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಶತಕ ಬಾರಿಸಿದ್ದ ಮನ್ಜೋತ್ ಕಲ್ರಾ, ರಣಜಿ ಟ್ರೋಫಿ ಟೂರ್ನಿಯಿಂದ ಅಮಾನತಾಗಿದ್ದಾರೆ.

ಅಂಡರ್ 16, ಅಂಡರ್ 19 ದಿನಗಳಲ್ಲಿ ವಯಸ್ಸಿನ ವಂಚನೆಯ ಆರೋಪಕ್ಕಾಗಿ ಡೆಲ್ಲಿ ಆಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಒಂಬುಡ್ಸ್ಮನ್, ಮನ್ಜೋತ್‌ಗೆ ರಣಜಿಯಿಂದ 1 ವರ್ಷದ ನಿಷೇಧ ವಿಧಿಸಿದೆ.

ವಯಸ್ಸಿನ ದಾಖಲೆಯಲ್ಲಿನ ವಂಚನೆಯ ಆರೋಪ ಡೆಲ್ಲಿ ತಂಡದ ಉಪನಾಯಕ ನಿತೀಶ್ ರಾಣಾ ಮೇಲೂ ಕೇಳಿ ಬಂದಿದೆ. ಜೂನಿಯರ್ ಲೆವೆಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಗ ರಾಣಾ ಕೂಡ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.