Wednesday, July 29, 2026

BDA Apartments

Home Front Page ಮೈಸೂರಿನಲ್ಲಿ ಯುಗಾದಿ ಸಂಗೀತೋತ್ಸವಕ್ಕೆ ಚಾಲನೆ: ಗಾಯಕರಿಂದ  ಸಂಗೀತಾ ರಸದೌತಣ

ಮೈಸೂರಿನಲ್ಲಿ ಯುಗಾದಿ ಸಂಗೀತೋತ್ಸವಕ್ಕೆ ಚಾಲನೆ: ಗಾಯಕರಿಂದ  ಸಂಗೀತಾ ರಸದೌತಣ

ಮೈಸೂರು,ಮಾರ್ಚ್,31,2025 (www.justkannada.in): ಮೈಸೂರು ಅರಮನೆ ಮಂಡಳಿ ವತಿಯಿಂದ ಯುಗಾದಿ ಸಂಗೀತೋತ್ಸವ ವಿಶ್ವಾವಸು ಸಂವತ್ಸರ-2025 ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಮೈಸೂರು ಅರಮನೆ ಆವರಣದಲ್ಲಿ ನಡೆಯಲ್ಲಿದ್ದು ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಈ ಸಂದರ್ಭದಲ್ಲಿ ಖ್ಯಾತ ಹಿನ್ನಲೆ ಗಾಯಕ ಅಜಯ್ ವಾರಿಯಾರ್, ಇಂದು ನಾಗರಾಜ್, ಕಂಬದರಂಗಯ್ಯ, ಶಶಿಕಲಾ ಮತ್ತು ತಂಡದವರಿಂದ ಸಂಗೀತಾ ರಸದೌತಣ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸಾ, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ,  ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ,  ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Key words: Ugadi Music Festival, Mysore palace