ಒಂದು ವರ್ಷದ ವರ್ಗಾವಣೆಗೆ ಇನ್ಸ್ ಪೆಕ್ಟರ್ ಗೆ 20 ಲಕ್ಷ ರೂ. ಕೇಳುತ್ತಿದ್ದಾರೆ – ರಾಜ್ಯ ಸರ್ಕಾರದ ವಿರುದ್ಧ ಶಾಸಕ ಸಾ.ರಾ ಮಹೇಶ್ ಆರೋಪ…

ಮೈಸೂರು, ಅಕ್ಟೋಬರ್,1,2020(www.justkannada.in): ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದ್ದು, ಒಂದು ವರ್ಷದ ವರ್ಗಾವಣೆಗೆ ಇನ್ಸ್ ಪೆಕ್ಟರ್ ಗೆ 20 ಲಕ್ಷ ರೂ. ಕೇಳುತ್ತಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಸಾ.ರಾ ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಎಲ್ಲಾ ವರ್ಗಾವಣೆಯು ದುಡ್ಡಿನಿಂದಲೇ ಆಗುತ್ತಿದೆ. ನಾನು ಮೊದಲೇ ಹೇಳಿದ್ದೆ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು. ವರ್ಗಾವಣೆ ದಂಧೆ ಈ ಸರ್ಕಾರದ ಅತೀ ದೊಡ್ಡ ದಂಧೆ. ಇದಕ್ಕೆ ಮೈಸೂರಿನಲ್ಲಿ ಪೊಲೀಸರ ವರ್ಗಾವಣೆ ಆಗುತ್ತಿರುವುದೇ ಸಾಕ್ಷಿ. ಸರ್ಕಾರದ ಪ್ರಾರಂಭದಿಂದ ಇಲ್ಲಿಯವರೆಗೂ ಇದು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಬಹುಕೋಟಿ ಹಣ ದುರ್ಬಳಕೆ ಆರೋಪ ಮಾಡಿರುವ ಶಾಸಕ ಸಾ.ರಾ ಮಹೇಶ್, ಆಂಧ್ರಪ್ರದೇಶದ ಖಾಸಗಿ ಸಂಸ್ಥೆಗೆ ರೋಹಿಣಿ ಸಿಂಧೂರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅದರ ಪ್ರತಿಫಲವಾಗಿ ರೋಹಿಣಿಸಿಂಧೂರಿಯವರಿಗೆ ಮೈಸೂರು ಜಿಲ್ಲಾಧಿಕಾರಿ ಸ್ಥಾನ ಗಿಫ್ಟ್ ನಂತೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಶಾಸಕ ಎಲ್. ನಾಗೇಂದ್ರ ಗೆ ಸಾ.ರಾ ಮಹೇಶ್ ತಿರುಗೇಟು…

ಯಡಿಯೂರಪ್ಪರವರ ಅನುಭವದ ವಯಸ್ಸು “ಸಾರಾ”ಗೆ ಆಗಿಲ್ಲ ಎಂಬ ಶಾಸಕ ಎಲ್. ನಾಗೇಂದ್ರ ಹೇಳಿಕೆಗೆ ತಿರುಗೇಟು ನೀಡಿರುವ ಸಾ.ರಾ ಮಹೇಶ್ , ಫಸ್ಟ್ ಟೈಮ್ ಶಾಸಕರಾಗಿದ್ದವರಿಗೆ  ನಾನು ಅಲ್ಲಿಗೇಷನ್ ಮಾಡ್ತಿಲ್ಲ.  ಉತ್ತರ ಕೊಡಿ ಎಂದು ಕೇಳ್ತಿದ್ದೇನೆ ಅಷ್ಟೇ  ಎಂದು ಟಾಂಗ್ ನೀಡಿದ್ದಾರೆ.transfer-scam-state-government-20-lakhs-insector-mysore-mla-sa-ra-mahesh

ಈ ದಾಖಲೆಗಳನ್ನು ತೆಗೆದುಕೊಳ್ಳಿ ಇದಕ್ಕೆ ಉತ್ತರ ಕೊಡಲು ಹೇಳಿ,  ಆ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಎಂದು ಸಾರಾ.ಮಹೇಶ್ ದಾಖಲೆ ತೋರಿಸಿದರು. ಈ ಬಗ್ಗೆ ಆಡಳಿತಾರೂಢ ಶಾಸಕರು ಹೆಚ್ಚು ಮಾತನಾಡಲಿ. ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ತಪ್ಪಾ .? ಈ ಬಗ್ಗೆ ಸ್ಥಳೀಯ ಬಿಜೆಪಿ ಶಾಸಕರು ಚಿಂತಿಸಲಿ ಎಂದು ಸಾ.ರಾ ಮಹೇಶ್ ಹೇಳಿದರು.

Key words: Transfer –scam-state government-  20 lakhs – Insector-mysore-MLA- sa.ra Mahesh