ಆ.25 ರಿಂದ ಮೂರು-ದಿನಗಳ ಕಾಲ ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸಿ ಮೇಳ

ಬೆಂಗಳೂರು, ಆಗಸ್ಟ್ 13,(www.justkannada.in): ರಾಜ್ಯ ಪ್ರವಾಸೋದ್ಯಮ ಇಲಾಖೆಯು ಆಗಸ್ಟ್ 25 ರಿಂದ 27 ರ ವರೆಗೆ ನಗರದ ದಿ ಲಲಿತ್ ಅಶೋಕ್ ನಲ್ಲಿ ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸಿ ಮೇಳ – 2019 ಆಯೋಜಿಸಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ  ಅವರು  ಆಗಸ್ಟ್ 25 ರಂದು ಮೂರು-ದಿನಗಳ ಈ ಮೇಳವನ್ನು ಉದ್ಘಾಟಿಸಲಿದ್ದಾರೆ. ವ್ಯಾವಹಾರಿಕ ಸಭೆಗಳ ಆಧಾರಿತ ಈ ಮೇಳದಲ್ಲಿ  250 ರಾಷ್ಟ್ರೀಯ ಹಾಗೂ 150 ಅಂತಾರಾಷ್ಟ್ರೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ  ಕೆ ಎನ್ ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words:  threeday- Karnataka International Tourist- Fair – August -25th.