Thursday, August 13, 2026

BDA Apartments

Home Front Page ಇಡೀ ದೇಶ ಪ್ರಧಾನಿ ಮೋದಿ ಮೂಲಕ ಏಕತೆ ಸಾರಿದೆ- ಲೋಕಸಭೆ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ...

ಇಡೀ ದೇಶ ಪ್ರಧಾನಿ ಮೋದಿ ಮೂಲಕ ಏಕತೆ ಸಾರಿದೆ- ಲೋಕಸಭೆ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಶಾಸಕ ಕೆ.ಎಸ್ ಈಶ್ವರಪ್ಪ..

ಚಿತ್ರದುರ್ಗ,ಮೇ,20,2019(www.justkannada.in): ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಲಿದ್ದು  ಇಡೀ ದೇಶ ಪ್ರಧಾನಿ ಮೋದಿ ಮೂಲಕ ಏಕತೆ ಸಾರಿದೆ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಕ್ರೈಸ್ತರು ಮುಸ್ಲೀಂರು ಇರುವ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ. ಈ ಮೂಲಕ ಇಡೀ ದೇಶ ಪ್ರಧಾನಿ ಮೋದಿ ಮೂಲಕ ಏಕತೆ ಸಾರಿದೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ನಾನೇ ಸಿಎಂ ಆಗ್ತೀನಿ ಎಂದು ಹೇಳುತ್ತಾ ಓಡಾಡುತ್ತಿದ್ದಾರೆ. ಸಚಿವರಾದ ಎಂಬಿ ಪಾಟೀಲ್, ಡಿಕೆ ಶಿವಕುಮಾರ್ ನಾನೂ ಸಿಎಂ ಸ್ಥಾನದ ರೇಸ್ ನಲ್ಲಿದ್ದೇನೆ ಎಂದು ಹೇಳುತ್ತಾರೆ. ಆದರೆ ಬಿಜೆಪಿಯಲ್ಲಿ ಇಂತಹ ವ್ಯವಸ್ಥೆ ಇಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

ಕಾಂಗ್ರೆಸ್ ನವರು ಜೆಡಿಎಸ್ ಸೋಲಿಸಲು ಯತ್ನಿಸಿದರೇ ಜೆಡಿಎಸ್ ನವರು ಕಾಂಗ್ರೆಸ್ ಸೋಲಿಸಲು ಯತ್ನಿಸಿದ್ದಾರೆ. ಇದಕ್ಕೆ ಮೈಸೂರೇ ಸಾಕ್ಷಿ. ಮೈಸೂರಿನಲ್ಲಿ ಜೆಡಿಎಸ್ ನವರು ಬಿಜೆಪಿಗೆ ವೋಟ್ ಹಾಕಿದ್ದಾರೆ. ಇದನ್ನ ಸಚಿವ ಸಾರಾ ಮಹೇಶ್ ಮತ್ತು ಜಿಟಿ ದೇವೇಗೌಡರೇ ಹೇಳಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು.

Key words: The whole country is united by Prime Minister Modi-  MLA KS Easwarappa

#politicalnews #chitrhadurga #kseshwarappa