ನಿಂತಿದ್ದ ಲಾರಿಗೆ ಕಾರು  ಡಿಕ್ಕಿ:  ನಾಲ್ವರು ಸಾವು..

ಮಂಡ್ಯ,ಮೇ,24,2019(www.justkannada.in): ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಕೇರಳಾ ಮೂಲದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಈ ಘಟನೆ ನಡೆದಿದೆ.  ಕೇರಳ ಮೂಲದ ಜಯದೀಪ್(29), ಜಿನ್ಸಿ(27), ಜ್ಞಾನತೀರ್ಥ(26), ಕಿರಣ್(30) ಮೃತಪಟ್ಟವರು. ಮೃತರು ಕಾರಿನಲ್ಲಿ  ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಕುರಿತು ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ  ನಡೆದಿದೆ.

Key words: The car collided with a standing lorry  Four death.

#crimenews #accident #lorry #mandya