ಬೆಂಗಳೂರು,ಜೂನ್,14,2025 (www.justkannada.in): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುತ್ತಿದ್ದುಈ ಮಧ್ಯೆ ಇದೀಗ ಆರ್ ಸಿಬಿ ಹಾಗೂ ಡಿಎನ್ ಎ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.
ವಿಚಾರಣೆಗೆ ಹಾಜರಾಗುವಂತೆ ಆರ್ ಸಿಬಿ ಹಾಗೂ ಡಿಎನ್ ಎ ಮಾಲೀಕರಿಗೆ ಇ-ಮೇಲ್ ಮೂಲಕ ಸಿಐಡಿ ನೋಟಿಸ್ ನೀಡಿದೆ. ಆರ್ ಸಿಬಿ ಮುಖ್ಯಸ್ಥ ಪ್ರಥಮೇಶ್ ಮಿಶ್ರಾ, ಉಪಾಧ್ಯಕ್ಷ ರಾಜೇಶ್ ಮೆನನ್, ಡಿಎನ್ ಎ ಸಂಸ್ಥೆ ಎಂಡಿ ವೆಂಕಟ್ ವರ್ಧನ್, ಡೈರೆಕ್ಟರ್ ರೌಲ್ ವರ್ಧನ್, ರೀಹಲ್ ವರ್ಧನ್ ಗೆ ಸಿಐಡಿ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.
ಈ ಹಿಂದೆ ಸಿಐಡಿ ಅಧಿಕಾರಿಗಳು ಆರ್ ಸಿಬಿ ಹಾಗೂ ಡಿಎನ್ ಎಂ ಕಂಪನಿ ಮಾಲೀಕರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಪ್ರಕರಣ ಸಂಬಂಧ ಈಗಾಗಲೇ ಕೆ ಎಸ್ ಸಿಎ ಪದಾಧಿಕಾರಳ ವಿಚಾರಣೆಯನ್ನು ಸಿಐಡಿ ನಡೆಸಿದೆ.
Key words: stampede case, CID ,notice ,RCB, DNA owners