ಕೇಂದ್ರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ ಎಸ್.ಟಿ.ಶೃತಿ ಅಧಿಕಾರ ಸ್ವೀಕಾರ

ಮೈಸೂರು, ಡಿಸೆಂಬರ್ 05, 2019 (www.justkannada.in): ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ (ಐಐಎಸ್) ಎಸ್.ಟಿ.ಶೃತಿ ಅಧಿಕಾರ ಸ್ವೀಕರಿಸಿದ್ದಾರೆ.

ಬಳ್ಳಾರಿ-ಕಲಬುರಗಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ನಿರ್ದೇಶಕ ಡಾ.ಜಿ.ಡಿ.ಹಳ್ಳೀಕೇರಿ ಅವರು ಶೃತಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕರ್ನಾಟಕ ಕೇಡರ್ ನ 2017ನೇ ಬ್ಯಾಚ್ ನ ಐಐಎಸ್ ಅಧಿಕಾರಿಯಾದ ಶೃತಿ ಅವರು ಹಾಸನ ಜಿಲ್ಲೆಯ ಸಕಲೇಶಪುರ ಮೂಲದವರು.

ಟಿವಿ 9, ಕಸ್ತೂರಿ ನ್ಯೂಸ್, ದೂರದರ್ಶನ (ಚಂದನ), ಆಕಾಶವಾಣಿಗಳಲ್ಲಿ ಸುದ್ದಿ ವಾಚಕಿಯಾಗಿ, ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದರು.