ಬೇರೆಯವರು ಬಂದು ವರುಣಾದಲ್ಲಿ ಅಭಿವೃದ್ಧಿ ಮಾಡಲು ಆಗಲ್ಲ: ನನ್ನನ್ನು ಆಶೀರ್ವಾದಿಸಿ- ಮಾಜಿ ಸಿಎಂ ಸಿದ್ಧರಾಮಯ್ಯ ಮನವಿ.

ಮೈಸೂರು,ಮೇ,4,2023(www.justkannada.in): ರಾಜ್ಯವಿಧಾನಸಭಾ ಕಣ ರಂಗೇರಿದ್ದು ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ಕ್ಷೇತ್ರ ವರುಣಾದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದು , ಸಿದ್ಧರಾಮಯ್ಯ ಅವರಿಗೆ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ.

ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಪ್ರಚಾರ ನಡೆಸಿ ಮತಯಾಚಿಸಿದರು. ನಟ ಶಿವರಾಜ್ ಕುಮಾರ್ ಸಹ ಸಿದ‍್ಧರಾಮಯ್ಯ ಪರ ಪ್ರಚಾರಕ್ಕಿಳಿದಿದ್ದಾರೆ.

ಈ ವೇಳೆ ಮಾತನಾಡಿರುವ ಸಿದ್ಧರಾಮಯ್ಯ 2008 ಮತ್ತು 2013ರಲ್ಲಿ ನಿಮ್ಮ ಆಶೀರ್ವಾದದಿಂದಲೇ ಗೆದ್ದಿದ್ದೇನೆ.  ಈ ಬಾರಿ ಆಶೀರ್ವಾದಿಸಿದರೇ ನನಗೆ ದೊಡ್ಡ ಶಕ್ತಿ ಬಂದಂತಾಗುತ್ತದೆ. ವರುಣಾವನ್ನ ಮಾದರಿ ಕ್ಷೇತ್ರವಾಗಿ  ಮಾಡುತ್ತೇನೆ ಎಂದು ಭರವಸೆ ನೀಡಿದರು.

ನನ್ನ ವಿರುದ್ದ ಬೆಂಗಳೂರು ಅಭ್ಯರ್ಥಿಯನ್ನ ತಂದು ನಿಲ್ಲಿಸಿದ್ದಾರೆ. ನಾನು ಸಿಎಂ ಆಗದ್ದಾಗ ಆ ಧರ್ಮ ಈ ಧರ್ಮ ಅಂತಾ ನೋಡಿಲ್ಲ ಎಲ್ಲಾ ಧರ್ಮದವರಿಗೂ ಕೆಲಸ ಮಾಡಿದ್ದೇನೆ. ಬೇರೆಯವರು ಬಂದು ವರುಣಾದಲ್ಲಿ ಅಭಿವೃಧ್ದಿ ಮಾಡೋಕೆ ಆಗಲ್ಲ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣಗೆ ಸಿದ್ಧರಾಮಯ್ಯ ಪರೋಕ್ಷ ಟಾಂಗ್ ನೀಡಿದರು.

Key words: Siddaramaiah -Campaign – Varuna- Assembly- Constituency