Sunday, September 13, 2026

BDA Apartments

Home Front Page ನಮ್ಮ ನಾಯಕರು ಎಲ್ಲವನ್ನೂ ಗಮನಿಸಿದ್ದಾರೆ: ಹಿರಿಯರನ್ನ ಕೈಬಿಡ್ತಾರೆ  ಅನ್ನೋದು ಗಾಳಿಸುದ್ದಿ- ಸಚಿವ ಗೋವಿಂದ ಕಾರಜೋಳ.

ನಮ್ಮ ನಾಯಕರು ಎಲ್ಲವನ್ನೂ ಗಮನಿಸಿದ್ದಾರೆ: ಹಿರಿಯರನ್ನ ಕೈಬಿಡ್ತಾರೆ  ಅನ್ನೋದು ಗಾಳಿಸುದ್ದಿ- ಸಚಿವ ಗೋವಿಂದ ಕಾರಜೋಳ.

ಬಾಗಲಕೋಟೆ,ಡಿಸೆಂಬರ್,9,2022(www.justkannada.in):  ಗುಜರಾತ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿ ಮತ್ತೆ ಅಧಿಕಾರದ ಗದ್ದುಗೆಗೇರಿದ್ದು ಚುನಾವಣೆಯಲ್ಲಿ ಯುವಕರಿಗೆ ಮಣೆ ಹಾಕಿದ್ದೇ ಬಿಜೆಪಿಗೆ ವರವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಹಿರಿಯರಿಗೆ ಕೋಕ್ ಕೊಟ್ಟು ಯುವಕರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,  ನಮ್ಮ ನಾಯಕರು  ಎಲ್ಲವನ್ನೂ ಗಮನಿಸುತ್ತಿದ್ದಾರೆ. ಹಿರಿಯರನ್ನ ಕೈಬಿಡ್ತಾರೆ ಅನ್ನೋದು ಗಾಳಿಸುದ್ದಿ. ಹಿರಿಯರನ್ನ ಕೈಬಿಡಲ್ಲ. ಅಂತಹ ಯಾವುದೇ ಪ್ರಕ್ರಿಯೆ ನಮ್ಮಲ್ಲಿ ನಡೆದಿಲ್ಲ. ಬದಲಾವಣೆ ಮಾಡುವ ಅನಿವಾರ್ಯತೆ ಬಂದರೇ. ಬದಲಾವಣೆ ಮಾಡುತ್ತಾರೆ ಎಂದಿದ್ದಾರೆ.ನಮ್ಮ ನಾಯಕರು ಎಲ್ಲವನ್ನೂ ಗಮನಿಸಿದ್ದಾರೆ govind

Key words: rumored – elders- will be –abandoned- Minister -Govinda Karajola.